ನವರಾತ್ರಿಯ ದೇಣಿಗೆ ಸಂಗ್ರಹ ವಿಚಾರ ಮತ್ತೊಂದು ದೂರು ದಾಖಲು

ಶಂಕರನಾರಾಯಣ ಅ.1(ಉಡುಪಿ ಟೈಮ್ಸ್ ವರದಿ): ಅಂಪಾರು ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಪೂಜೆಯ ದೇಣಿಗೆ ಸಂಗ್ರಹಣೆ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ವಿಚಾರಕ್ಕೆ ಸಂಬಂಧಿಸಿ ಮತ್ತೊಂದು ದೂರು ದಾಖಲಾಗಿದೆ.

ಈ ಬಗ್ಗೆ ಅಂಪಾರು ಗ್ರಾಮದ ಸುಕೇತ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಸುಕೇತ್ ಅವರ ಸಹೋದರ ಅಜಿತ್ ಅವರು ಸಮಾಜ ಸೇವೆ ಮಾಡುತ್ತಿದ್ದು ಈ ವಿಷಯದಲ್ಲಿ ಆರೋಪಿ ರಂಜೀತ್ ವಾಟ್ಸಾಪ್‍ನಲ್ಲಿ ಅವಹೇಳನಕಾರಿ ಮೆಸೇಜ್ ಹಾಕುತ್ತಿದ್ದ. ಅಲ್ಲದೆ ಅಂಪಾರು ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಪೂಜೆಯ ಬಗ್ಗೆ ಹಣ ಸಂಗ್ರಹಿಸುವಂತೆ ಅಜಿತ್ ಅವರಿಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸೆ.29 ರಂದು ವ್ಯಾಟ್ಟಾಪ್ ಗ್ರೂಪ್ ನಲ್ಲಿ ನವರಾತ್ರಿ ಪೂಜೆಗೆ ಹಣ ನೀಡುವವರು ಅಜಿತ್ ನಲ್ಲಿ ನೀಡಿ ಎಂದು ಮೆಸೇಜ್ ಹಾಕಿದ್ದು, ಈ ಬಗ್ಗೆ ಆರೋಪಿಯು ವ್ಯಾಟ್ಸಾಪ್ ಗ್ರೂಪನಲ್ಲಿ ಅವಹೇಳನ ಮಾಡುವ ರೀತಿಯಲ್ಲಿ ಮೆಸೇಜ್ ಮಾಡಿರುತ್ತಾನೆ.

ಈ ಬಗ್ಗೆ ವಿಚಾರಿಸಲು ನಿನ್ನೆ ಅಜಿತ್ ಅವರೊಂದಿಗೆ ಸುಕೇತ್ ಅವರು ಅಂಪಾರು ಆಟೋರಿಕ್ಷಾ ನಿಲ್ದಾಣಕ್ಕೆ ಹೋಗಿ ವಿಚಾರಿಸಿದಾಗ ಆರೋಪಿಯು ಏಕಾಏಕಿ ಅಕ್ರಮವಾಗಿ ತಡೆದು ನಿಲ್ಲಿಸಿ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!