ಪಿಎಫ್ಐನ 14ಕ್ಕೂ ಅಧಿಕ ಮುಖಂಡರು ಮತ್ತು ಕಾರ್ಯಕರ್ತರಿಗೆ ಜಾಮೀನು

ಮಂಗಳೂರು ಅ.1: ಪಿ.ಎಫ್.ಐ ನಿಷೇಧದ ವೇಳೆ ಬಂಧನಕ್ಕೊಳಪಟ್ಟಿದ್ದ 14ಕ್ಕೂ ಅಧಿಕ ಮುಖಂಡರು ಮತ್ತು ಕಾರ್ಯಕರ್ತರಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಮಂಗಳೂರು ತಹಶೀಲ್ದಾರ್ ಮತ್ತು ಉಳ್ಳಾಲ ತಹಶೀಲ್ದಾರ್ ನ್ಯಾಯಾಲಯವು, ಮುಹಮ್ಮದ್ ಶರೀಫ್ ಪಾಂಡೇಶ್ವರ, ಕುದ್ರೋಳಿ ನಿವಾಸಿಗಳಾದ ಮುಝೈರ್, ಮುಹಮ್ಮದ್ ನೌಫಲ್ ಹಂಝಾ, ತಲಪಾಡಿ ಕೆ.ಸಿ.ನಗರದ ಶಬ್ಬೀರ್ ಅಹ್ಮದ್, ನವಾಝ್ ಉಳ್ಳಾಲ, ಉಳಾಯಿಬೆಟ್ಟು ಮುಹಮ್ಮದ್ ಇಕ್ಬಾಲ್, ಕೃಷ್ಣಾಪುರದ ದಾವೂದ್ ನೌಶಾದ್, ಕೆ.ಪಿ.ನಗರದ ನಝೀರ್ ಮುಹ್ಮಮದ್, ಇಸ್ಮಾಯೀಲ್ ಇಂಜಿನಿಯರ್, ಇಬ್ರಾಹೀಂ ಮೂಡಬಿದರೆ ಎಂಬವರಿಗೆ ಜಾಮೀನು ನೀಡಿದೆ. ಹಾಗೂ ಇವರನ್ನು ನಿನ್ನೆ ರಾತ್ರಿ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದರ ಜೊತೆಗೆ ಪುತ್ತೂರಿನಲ್ಲಿ ಒಬ್ಬರು, ಬಂಟ್ವಾಳದಲ್ಲಿ ಮೂವರು, ಮೂಡಬಿದರೆಯಲ್ಲಿ ಇಬ್ಬರು ಮುಖಂಡರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!