ಉಡುಪಿ ಎಸ್’ಡಿಪಿಐ ಮಾಜಿ ಜಿಲ್ಲಾಧ್ಯಕ್ಷ ಮನೆಗೆ ಉಪ ಕಮೀಷನರ್ ನೇತೃತ್ವದ ತಂಡ ದಾಳಿ
ಉಡುಪಿ ಅ.1: ಎಸ್.ಡಿ.ಪಿ.ಐ ಮಾಜಿ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಅವರ ಕಿನ್ನಿಮೂಲ್ಕಿ ಕನ್ನರ್ಪಾಡಿ ದೇವಸ್ಥಾನದ ಬಳಿಯಿರುವ ಮನೆಗೆ ಉಪ ಕಮೀಷನರ್ ಕೆ.ರಾಜು ಅವರ ನೇತೃತ್ವದ ತಂಡ ದಾಳಿ ನಡೆಸಿದೆ.
ಮನೆಗೆ ದಾಳಿ ಮಾಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಒಂದು ಪೆನ್ ಡ್ರೈವ್, ಪಿ.ಎಫ್.ಐ ಸಂಬಂಧಪಟ್ಟ ಪುಸ್ತಕ ಹಾಗೂ ಪಿ.ಎಫ್.ಐ ನ ಎರಡು ಸ್ಮರಣಿಕೆಗಳು ಲಭಿಸಿವೆ. ಹಾಗೂ ವಸ್ತುಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ನಜೀರ್ ಮತ್ತು ಬಶೀರ್ ಅವರ ಮನೆಯನ್ನು ಪರಿಶೀಲನೆ ನಡೆಸುವ ವೇಳೆ ಪೋಲಿಸ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನು ಮನೆಯವರ ಸಮ್ಮುಖದಲ್ಲಿ ಉಪ ಕಮೀಷನರ್ ರಾಜು ಅವರು ಪರಿಶೀಲನೆ ನಡೆಸಿ, ಮನೆಯ ಒಳಗೆ ಪರಿಶೀಲನೆಗೆ ಕಳುಹಿಸಿದ್ದಾರೆ. ಪೋಲಿಸರು ಹೊರಗಿನಿಂದ ತಂದು ಇಟ್ಟಿದ್ದಾರೆ ಎಂಬ ಆರೋಪ ಬರಬಾರದೆಂದು ಈ ನಿಯಮವನ್ನು ಪಾಲಿಸಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ದಾಳಿಯ ವೇಳೆ ಡಿವೈಎಸ್ಪಿ ಸುಧಾಕರ್ ನಾಯ್ಕ ನಗರ ಠಾಣಾಧಿಕಾರಿ ಸೇರಿದಂತೆ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ನಿಮಗೆ ಶಸ್ತ್ರಾಸ್ತ್ರಗಳು ಮತ್ತು ಬಾಂಬ್ಗಳು ಬೇಕಾದರೆ ನೀವು ಸಂಘಪರಿವಾರದ ಕಚೇರಿಗಳಿಗೆ
ಮತ್ತು ಅವರ ಮನೆಗೆ ಹೋಗಬೇಕು ಹೊರತು PFI ಅಲ್ಲ