ಕೇಂದ್ರ ಸಚಿವೆ ಶೋಭಾ ಜೊತೆ ಸೆಲ್ಫಿ ತೆಗೆಯಲು ಮುಗಿಬಿದ್ದ ಬಿಜೆಪಿ ಕಾರ್ಯಕರ್ತರು

ಕಾಪು ಸೆ.30 (ಉಡುಪಿ ಟೈಮ್ಸ್ ವರದಿ): ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಜೊತೆ ಸೆಲ್ಫಿ ತೆಗೆಯುವ ಮೂಲಕ ಮಿಥುನ್ ರೈ ಅವರ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ.

ಜನಪರ ಕೆಲಸ ಮಾಡುತ್ತಿರುವ ಸರಳ ಸಂಸದೆ, ಸಚಿವರ ಜೊತೆ ಸೆಲ್ಪಿ ತೆಗೆದರೆ ಬಹುಮಾನ ನೀಡುವುದಾಗಿ ಕಾಂಗ್ರೆಸ್ ನ ಮಿಥುನ್ ರೈ ಅವರು ಹೇಳಿಕೆ ನೀಡಿದ್ದರು. ಇಂದು ಸೇವಾ ಪಾಕ್ಷಿಕದ ಅಂಗವಾಗಿ ಕಾಪು ಪೇಟೆಯಲ್ಲಿ ಖಾದಿ ಮೇಳವನ್ನು ಉದ್ಘಾಟಿಸಿದ ನಂತರ ಮಹಿಳಾಮೋರ್ಚಾ, ಯುವಮೋರ್ಚಾ ಕಾರ್ಯಕರ್ತರು ಸಚಿವೆಯೊಂದಿಗೆ ಸೆಲ್ಫಿ ತೆಗೆದು ಮಿಥುನ್ ರೈ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಈ ವೇಳೆ ಮಾತನಾಡಿದ ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ಅವರು, ಜನಪರ ಕೆಲಸ ಮಾಡುತ್ತಿರುವ ಸರಳ ಸಂಸದೆ, ಸಚಿವರ ಜೊತೆ ಸೆಲ್ಪಿ ತೆಗೆದರೇ ಬಹುಮಾನ ನೀಡುವುದಾಗಿ ಕಾಂಗ್ರೆಸಿನ ಮಿಥುನ್ ರೈ ಹೇಳಿದ್ದಾರೆ. ಹೀಗಾಗಿ ಶೋಭಾಕ್ಕನವರ ಜೊತೆ ಮಹಿಳಾಮೋರ್ಚಾದ ತಂಡ ಸೆಲ್ಪಿ ತೆಗೆದು ಮಿಥುನ್ ರೈ ಅವರ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಟಾಂಗ್ ನೀಡಿದರು.

Leave a Reply

Your email address will not be published. Required fields are marked *

error: Content is protected !!