ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ: ಬಡವರಿಗೆ ಆಹಾರ ಧಾನ್ಯ ವಿತರಣೆ

ಉಡುಪಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಯಂತಿ ಮತ್ತು ಸೇವಾ ಸಪ್ತಾಹದ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ದಾವುದ್ ಅಬೂಬಕರ್ ರವರ ನೇತ್ರತ್ವದಲ್ಲಿ ಸೋಮವಾರ ಉಡುಪಿ ನಗರದಲ್ಲಿ ಗುರುತಿಸಿದ ತೀರಾ ಬಡವರಿಗೆ ಆಹಾರ ಧಾನ್ಯ, ದಿನಸಿ ವಸ್ತುಗಳ ಫುಡ್ ಕಿಟ್ ಗಳನ್ನು ಅಶಕ್ತ ಬಡವರ ಮನೆಮನೆಗೆ ಹಂಚಲಾಯಿತು.

ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ದಾವುದ್ ಅಬೂಬಕರ್, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿಸೋಜ, ಆಸೀಫ್ ಶೇಖ್ ಕಟಪಾಡಿ,

ಉಪಾಧ್ಯಕ್ಷ ಅಬ್ದುಲ್ ಖಾದರ್ ಇಂದಿರಾನಗರ, ಕಚೇರಿ ಕಾರ್ಯದರ್ಶಿ ಮೈಕಲ್ ಡಿಸೋಜ ಚಿಟ್ಪಾಡಿ ಮತ್ತು ಕಾರ್ಯಕಾರಿಣಿ ಸದಸ್ಯರು ಹಾಗೂ ಉಡುಪಿ ನಗರ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಜುನೈದ್, ಉಡುಪಿ ನಗರ ಸಭಾ ಸದಸ್ಯರಾದ ಚಂದ್ರಶೇಖರ್ ಇಂದಿರಾನಗರ, ವೆಂಕಟೇಶ್ ಕಾಮತ್ ಮತ್ತು ಪ್ರಶಾಂತ್ ಬಾಬಾ, ಸಂಜೀತ್ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!