ಸಿದ್ದರಾಮಯ್ಯ ವಿರುದ್ಧದ ದಾಖಲೆ ನೀಡಿ ಇಲ್ಲವೇ ಕ್ಷಮೆ ಯಾಚಿಸಿ- “SUNIL PAY ಪೋಸ್ಟರ್ -ಕಾರ್ಕಳ ಕಾಂಗ್ರೆಸ್ ಎಚ್ಚರಿಕೆ


ಕಾರ್ಕಳ: ಮಾಜಿ‌ ಸಿ.ಎಂ, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭ್ರಷ್ಟಾಚಾರದ ಪಿತಾಮಹ ಎಂದು ಕರೆದಿರುವ‌ ಸಚಿವ ಸುನೀಲ್ ಕುಮಾರ್ ಭ್ರಷ್ಟಾಚಾರ ದಾಖಲೆ ಬಹಿರಂಗಪಡಿಸಬೇಕು ಇಲ್ಲವಾದಲ್ಲಿ ಕ್ಷಮೆಯಾಚಿಸಬೇಕು ತಪ್ಪಿದ್ದಲ್ಲಿ ಪೇ ಸಿ.ಎಂ ಮಾದರಿಯಲ್ಲಿ ಸುನಿಲ್ ಪೇ ಪೋಸ್ಟರ್ ಕಾರ್ಕಳದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಕಾರ್ಕಳ ಕಾಂಗ್ರೆಸ್ ವಕ್ತಾರ ಶುಭದ ರಾವ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಅವರು, ಸಿದ್ದರಾಮಯ್ಯರವರು ಈ ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ, ಯಾವುದೇ ಲೋಪಗಳಿಲ್ಲದ ಭ್ರಷ್ಟಾಚಾರ ರಹಿತ ಪೂರ್ಣ ಅವಧಿಯ ಆಡಳಿತ ನೀಡಿದ ಹೆಗ್ಗಳಿಕೆ ಅವರದ್ದು, ಅವರ ಜನಪರ ಯೋಜನೆಗಳಿಂದ ಕೋಟ್ಯಾಂತರ ಜನರು ನೆಮ್ಮದಿಯ ಬದುಕು ಬದುಕ್ಕಿದ್ದಾರೆ, ಅಂತವರನ್ನು ನೀವು ಮಾದರಿಯಾಗಿ ಸ್ವೀಕರಿಸಬೇಕೇ ಹೊರತು ಆಧಾರ ರಹಿತ ಅರೋಪ ಮಾಡುವುದಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ

“ತಾನು ಕಳ್ಳ ಪರರ ನಂಬ” ಎನ್ನುವ ಗಾದೆ ಮಾತು ನೆನಪಿಗೆ ಬರುತ್ತದೆ. ನೀವು ಸಚಿವರಾದ ಮೇಲೆ ಮುಖ್ಯಮಂತ್ರಿಯವರಿಗೂ ಗ್ರಹಚಾರ ಪ್ರಾರಂಭವಾಗಿದೆ ಅಂದಿನಿಂದಲೇ ರಾಜ್ಯ ಸರಕಾರದ ಮೇಲೆ ಗಂಭೀರ ಆರೋಪಗಳು ಬರಲು ಪ್ರಾರಂಭವಾಯಿತು, ನಿಮ್ಮದೇ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಜಗತ್ಜಾಹಿರಾಗಿದೆ ಮೊದಲು ಆ ಬಗ್ಗೆ ತನಿಖೆ ನಡೆಸಿ ಎಂದು ಸುನಿಲರ ವಿರುದ್ದ ವ್ಯಂಗ್ಯ ಮಾಡಿದ್ದಾರೆ.

ಪ್ರಸ್ತುತ ಈಗ ನಿಮ್ಮ ಆಸ್ತಿಯ ಮೌಲ್ಯ ಎಷ್ಟು ಮತ್ತು ಅದರ ಮೂಲ ಯಾವುದೆಂದು ನಿಮಗೇ ಗೊತ್ತಿದ್ದರೆ ಬಹಿರಂಗಪಡಿಸಿ,‌ ಒಂದು ವೇಳೆ ಎಲ್ಲವನ್ನು ಹೇಳಲು ಅಸಾದ್ಯವಾದರೆ ನಮಗೆ ಗೊತ್ತಿದ್ದ ಕೆಲವನ್ನು ನೆನಪಿಸುವ ಪ್ರಯತ್ನ ‌ಮಾಡುತ್ತೇವೆ. ಆಗ ಭ್ರಷ್ಟಾಚಾರ ಪಿತಾಮಹ ಯಾರೆಂದು ಕ್ಷೇತ್ರದ ಜನರೇ ತೀರ್ಮಾನಿಸಲಿ ಕಾರ್ಕಳದ ಯಾವೊಬ್ಬ ರಾಜಕಾರಣಿಯೂ ನಿಮ್ಮಷ್ಟು ಗಂಭೀರ ಅರೋಪವನ್ನು ಎದುರಿಸಿಲ್ಲ ಇದು ಕ್ಷೇತ್ರದ ಜನರ ದೌರ್ಭಾಗ್ಯ ಎಂದರು.

ಈ ಹಿಂದೆ ಹಲವು ಬಾರಿ ನಿಮ್ಮ ಭ್ರಷ್ಟಾಚಾರವನ್ನು ದಾಖಲೆ ‌ಸಹಿತ ಬಿಡುಗಡೆಗೊಳಿಸಿದ್ದೇವೆ ಯಾವುದಕ್ಕೂ ಉತ್ತರಿಸುವ ಧೈರ್ಯ ನಿಮಗಿಲ್ಲ ನಾವು ಮಾಡಿದ ಆರೋಪಕ್ಕೆ ಇನ್ನೂ ಬದ್ದರಿದ್ದೇವೆ ಸವಾಲನ್ನು ಸ್ವೀಕರಿಸುವ ದೈರ್ಯ ನಿಮಗಿದೆಯೇ ಎಂದು ಸವಾಲು ಹಾಕಿದ್ದಾರೆ.
ಬಂಡಿಮಠದ ಹಿರಿಯ ರಾಜಕಾರಣಿಯೊಬ್ಬರ ಹೆಸರಿನಲ್ಲಿದ ನಿಮ್ಮ ಆಸ್ತಿಯನ್ನು ಅವರ ಮರಣಾನಂತರ ಅವರ ಕುಟುಂಬದವರನ್ನು ಹೆದರಿಸಿ ಹಿಂಪಡೆದ್ದೀರಿ ಎಂದು ಜನರಾಡಿಕೊಳ್ಳುತ್ತಿದ್ದಾರೆ ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ.

ಇತೀಚಿನ ದಿನಗಳಲ್ಲಿ ತಾವು ನಮ್ಮ ಪಕ್ಷ ಮತ್ತು ಪಕ್ಷದ ನಾಯಕರ ಬಗ್ಗೆ ಹೀನಾಯವಾಗಿ ಮಾತನಾಡುವುದನ್ನು ರೂಡಿ ಮಾಡಿಕೊಂಡಿದ್ದೀರಿ ಅಧಿಕಾರ ಶಾಶ್ವತವಲ್ಲ ಜವಾಬ್ದಾರಿ ಸ್ಥಾನದಲ್ಲಿರುವವರ ಭಾಷೆ ಹಿಡಿತದಲ್ಲಿದ್ದರೆ ಒಳ್ಳೆಯದು ಇಲ್ಲವಾದರೆ ನಿಮ್ಮ ದಾಟಿಯಲ್ಲಿ ಉತ್ತರಿಸಲು ನಾವೂ ಸಿದ್ದರಿದ್ದೇವೆ ಎಂದು ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದರು.

ಈ‌ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಸುಧಾಕರ್ ಶೆಟ್ಟಿ,‌ ಮಾಳ ಪಂಚಾಯತ್ ಮಾಜಿ ಅದ್ಯಕ್ಷರಾದ ಅಜಿತ್ ಹೆಗ್ಡೆ, ಯುವ ಕಾಂಗ್ರೇಸ್ ಅದ್ಯಕ್ಷರಾದ ಯೋಗೀಶ್ ಇನ್ನಾ‌ ಉಪಸ್ಥಿತರಿದ್ದರು.

1 thought on “ಸಿದ್ದರಾಮಯ್ಯ ವಿರುದ್ಧದ ದಾಖಲೆ ನೀಡಿ ಇಲ್ಲವೇ ಕ್ಷಮೆ ಯಾಚಿಸಿ- “SUNIL PAY ಪೋಸ್ಟರ್ -ಕಾರ್ಕಳ ಕಾಂಗ್ರೆಸ್ ಎಚ್ಚರಿಕೆ

  1. ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಜೀಯವರ ಬಗ್ಗೆ ಟೀಕೆ ಮಾಡಲು ಯಾವ ನೈತಿಕ ಹಕ್ಕು ಇದೆ. ಸ್ವತಃ ಅಧಿಕಾರ ದುರುಪಯೋಗ ಪಡಿಸಿ ಸರ್ಕಾರದ ಅಂಗ ಸಂಸ್ಥೆಯ ಸಿಮೆಂಟ್ ಕಳ್ಳತನದ ಮುಖಾಂತರ ಬಳಸಿ ಹಗರಣಕ್ಕೆ ಸಿಲುಕಿರುವ ನಿಮಗೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕು ಇಲ್ಲ

Leave a Reply

Your email address will not be published. Required fields are marked *

error: Content is protected !!