ನೀರಿನ ತೊಟ್ಟಿಯಲ್ಲಿ ಬಿದ್ದು ಹನ್ನೊಂದು ತಿಂಗಳ ಹಸುಳೆ ಮೃತ್ಯು

ಶಿವಮೊಗ್ಗ ಸೆ.26: ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಹನ್ನೊಂದು ತಿಂಗಳ ಮಗುವೊಮದು ನೀರಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಇಲ್ಲಿನ ಛಾಯಾಗ್ರಾಹಕ ದೇವರಾಜ್ ಅವರ ಪುತ್ರ ಅಕ್ಷಯ್ (11 ತಿಂಗಳು) ಮೃತಪಟ್ಟ ಮಗು

ಮಹಾಲಯ ಅಮವಾಸ್ಯೆ ಕಾರಣ ನಿನ್ನೆ ಕುಟುಂಬಸ್ಥರು ವಾಹನ ತೊಳೆಯಲು ಪೂಜೆ ಮಾಡುವಲ್ಲಿ ಮಗ್ನರಾಗಿದ್ದ ವೇಳೆ, ಅಂಬೆಗಾಲು ಇಡುತ್ತಿದ್ದ ಮಗು ಅರಿವಿಲ್ಲದೆ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ. ಸ್ವಲ್ಪ ಹೊತ್ತಿನ ನಂತರ ಮಗುವಿನ ತಾತ ವಾಹನ ತೊಳೆಯಲು ಬಂದಾಗ ತೊಟ್ಟಿಯಲ್ಲಿ ಮಗುವನ್ನು ನೋಡಿದ್ದಾರೆ. ತಕ್ಷಣ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!