ಕುಂದಾಪುರ: ಹೋಟೆಲ್ ಕಾರ್ಮಿಕ ಆತ್ಮಹತ್ಯೆ
ಶಂಕರನಾರಾಯಣ ಸೆ.5(ಉಡುಪಿ ಟೈಮ್ಸ್ ವರದಿ) : ಅನಾರೋಗ್ಯದ ಕಾರಣದಿಂದ ಅತಿಯಾದ ಮದ್ಯ ಸೇವನೆಯಿಂದ ಮಾನಸಿಕವಾಗಿ ನೊಂದು ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದ ಅಂಪಾರು ಗ್ರಾಮದ ಗುಬ್ಯಾಡಿ ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಪ್ರಭಾಕರ ಶೆಟ್ಟಿ (43) ಆತ್ಮಹತ್ಯೆ ಮಾಡಿಕೊಂಡವರು.
ಬೆಂಗಳೂರಿನಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ಪ್ರಭಾಕರ ಶಟ್ಟಿ ಅವರು ಗಣೇಶ ಚೌತಿ ಹಬ್ಬದ ಪ್ರಯುಕ್ತ ಊರಿಗೆ ಬಂದಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದು, ಬಳಿಕ ಮನೆಯಲ್ಲಿ ಯಾರೊಂದಿಗೂ ಮಾತನಾಡದೇ ಮೌನವಾಗಿರುತ್ತಿದ್ದರು.
ಅವರು ಅನಾರೋಗ್ಯದಿಂದದಾಗಿ ಅತಿಯಾದ ಮದ್ಯ ಸೇವನೆಯಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆ ಗೊಂಡು ನಿನ್ನೆ ಬೆಳಿಗ್ಗೆ ಅಂಪಾರು ಗ್ರಾಮದ ಗುಬ್ಯಾಡಿ ಎಂಬಲ್ಲಿ ಮನೆಯ ಸಮೀಪದ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮೃತರ ಅಣ್ಣ ಸುಧಾಕರ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.