ಮಣಿಪಾಲ: ನಶೆಯಲ್ಲಿ ಹಿಮ್ಮುಖ ಚಲಾಯಿಸಿದ ಕಾರು- ಪಬ್ ಸಿಬ್ಬಂದಿ, ‌2 ಕಾರು ಜಖಂ

ಉಡುಪಿ ಸೆ.4: ಕುಡಿದ ಮತ್ತಿನಲ್ಲಿ ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಪಬ್ ನೌಕರ ಹಾಗೂ ಎರಡು ಇತರ ಕಾರುಗಳಿಗೆ  ಡಿಕ್ಕಿ ಹೊಡೆದ ಘಟನೆ ಮಣಿಪಾಲದ ಪಬ್ ವೊಂದರ ಹೊರಗೆ ನಿನ್ನೆ ತಡರಾತ್ರಿ ನಡೆದಿದೆ.

ಅಪಘಾತ ಪಡಿಸಿದ ಕಾರ್ ಚಾಲಕ ಸುಹಾಸ್ ತಂದೆ ರವಿಚಂದ್ರ ಎಂಬವರ ವಿರುದ್ಧ ಅಪಘಾತಕ್ಕೆ ಒಳಗಾದ ಕಾರು ಚಾಲಕರೊಬ್ಬರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗೂ ಕಾರು ಚಾಲಕ ಸುಹಾಸ್ ನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ತಡರಾತ್ರಿ‌ ತನಕ ಮಣಿಪಾಲದ ಪಬ್ ಒಂದರಲ್ಲಿ ಪಾರ್ಟಿ‌ ಮಾಡಿದ ತಂಡ ಪಾರ್ಟಿ ಮುಗಿಸಿ ಪಬ್ ನಿಂದ ಹೊರಗೆ ಹೋಗುವಾಗ ತನ್ನ ಕಾರ್‌ ನ್ನು ಕುಡಿದ ಮತ್ತಿನಲ್ಲಿ ಹಿಮ್ಮುಖವಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದ ಪರಿಣಾಮ ಪಬ್ ನೌಕರ ವಿಕ್ರಾಂತ್ ಎಂಬುವವರ ಕಾಲಿಗೆ ಗಾಯವಾಗಿದೆ. ಅಲ್ಲದೆ ಪಾರ್ಕಿಂಗ್‌ನಲ್ಲಿದ್ದ ಇನ್ನೆರಡು ಕಾರಿಗೂ ಡಿಕ್ಕಿ ಹೊಡೆದಿದ್ದಾನೆ.

 ಕಾರ್‌ನ ಚಾಲಕ ಸುಹಾಸ್ ವಾಹನ ಚಾಲನೆಯ ವೇಳೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದು ದೃಢಪಟ್ಟಿದ್ದು ಇನ್ನಿತರೆ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹಾಗೂ ಕಾರ್‌ನಲ್ಲಿದ್ದ  ಆತನ ಸ್ನೇಹಿತರಾದ ಭರತ್, ನವೀನ್ ಕಲ್ಯಾಣ್, ನಿರ್ಮಲ, ಕವನ ಎಂಬುವವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ. 

ಇವರೆಲ್ಲರೂ ಬೆಂಗಳೂರು ಮತ್ತು ಶಿವಮೊಗ್ಗದ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಐಟಿ ಸೆಕ್ಟರ್‌ನಲ್ಲಿ ನೌಕರಿ ಮಾಡುತ್ತಿದ್ದರು. ಸಂಬಂಧಿಕರ ಮದುವೆಗೆ ಉಡುಪಿಗೆ ಬಂದಿದ್ದು ರಾತ್ರಿ ಪಬ್‌ಗೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ.

ಈ ಅಪಘಾತದಿಂದ ಎರಡು ಕಾರುಗಳು ಜಖಂಗೊಂಡಿದ್ದು ಚಾಲಕ ರೋಶನ್ ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!