ಕುಂದಾಪುರ: ವ್ಯಕ್ತಿಗೆ ಹಲ್ಲೆಗೈದು ಜೀವ ಬೆದರಿಕೆ- 8 ಮಂದಿ ವಿರುದ್ಧ ದೂರು

ಕುಂದಾಪುರ ಆ.13(ಉಡುಪಿ ಟೈಮ್ಸ್ ವರದಿ): ಕುಂದಾಪುರ ತಾಲೂಕು ಕಟ್‍ಬೆಲ್ತೂರು ಗ್ರಾಮದ ಹೆರೆಗೋಡು ಎಂಬಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ನೆರೆಕರೆಯವರು ಸೇರಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿರುವುದಾಗಿ ಗೋಪಾಲ.ಎಸ್ ಪೂಜಾರಿ ಎಂಬವರು 8 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಗೋಪಾಲ.ಎಸ್ ಪೂಜಾರಿ ಅವರು ನಿನ್ನೆ ಮಧ್ಯಾಹ್ನದ ವೇಳೆ ತಮ್ಮ ಮನೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ ಅವರ ನೆರೆಕರೆಯವರಾದ ರವಿ ಪೂಜಾರಿ, ಶಂಕರ ಪೂಜಾರಿ, ಜೈರಾಮ್ ಪೂಜಾರಿ, ರಾಧ ಪೂಜಾರ್ತಿ, ಬಚ್ಚಿ ಪೂಜಾರ್ತಿ, ರತ್ನ ಪೂಜಾರ್ತಿ, ಗಿರಿಜಾ ಪೂಜಾರ್ತಿ, ಲಲಿತಾ ಪೂಜಾರ್ತಿ ಎಂಬವರು ಸೇರಿಕೊಂಡು ಗೋಪಾಲ ಎಸ್ ಪೂಜಾರಿ ಅವರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಏನು ಬಹಳ ಹಾರಾಡ್ತಿಯಲ್ಲಾ, ಈ ರಸ್ತೆಯಲ್ಲಿ ಇನ್ನೊಮ್ಮೆ ಓಡಾಡಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!