ಉಡುಪಿ: ಪೊಲೀಸರ ಕಾರ್ಯಾಚರಣೆ ಗಾಂಜಾ ಸಹಿತ ಇಬ್ಬರು ಬಂಧನ

ಉಡುಪಿ : ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ನಿರೀಕ್ಷಕರಾದ ಸೀತಾರಾಮಗೆ ಇಂದು ದೊರೆತ ಖಚಿತ ಮಾಹಿತಿ ಮೇರೆಗೆ ಕಕ್ಕುಂಜೆ ರೈಲ್ವೆ ಬ್ರಿಡ್ಜ್ ನ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಪಶ್ಚಿಮ ಬಂಗಾಲದ ಬಂಚಾರಾಮ್ ಮಿತ್ರ(58) ಮುಕುಲ್ ಮಹಾಂತ (58) ಬಂಧಿಸಲಾಗಿದೆ.
ಬಂಧಿತರಿಂದ ಅಕ್ರಮವಾಗಿ ಮಾರಾಟ ಮಾಡಲು ಹೊಂದಿದ್ದ ಸುಮಾರು 40,000 ರೂಪಾಯಿ ಮೌಲ್ಯದ 2. 526 ಗ್ರಾಂ ತೂಕದ ಗಾಂಜಾವನ್ನು ಮತ್ತು 5000 ಮೌಲ್ಯದ ಮೊಬೈಲ್ ಹ್ಯಾಂಡ್ ಸೆಟ್3, ನಗದು ಹಣ ರೂ. 3700-, ಸುಮಾರು 300- ರೂ ಬೆಲೆಬಾಳುವ ತೂಕ ಸಾಧನ-1 ಹಾಗೂ ಸಣ್ಣ ಪ್ಲಾಸ್ಟಿಕ್ ತೊಟ್ಟೆ-22, ಒಟ್ಟು ರೂಪಾಯಿ 59000 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ಉಪನೀರಿಕ್ಷಕ ನಾರಾಯಣ ,ಸಿಬ್ಬಂದಿಗಳಾದ ಕೇಶವ ಗೌಡ ನಾಗೇಶ್, ಕೃಷ್ಣಪ್ರಸಾದ್, ರಾಘವೇಂದ್ರ, ಸಂತೋಷ ಖಾರ್ವಿ, ಪ್ರವೀಣ್, ಜೀವನ್ ಮತ್ತು ಸಂತೋಷ ನಾಯ್ಕ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!