ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ : “ಕೆಸರ್ದ ಗೊಬ್ಬು”

 ಉಡುಪಿ:  ನಗರ ಭಾಗದ ಸಾರ್ವಜನಿಕರಿಗೆ ಗ್ರಾಮೀಣ ಕ್ರೀಡಾಕೂಟದ ರಸದೌತಣ ನೀಡಲು ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ  ಸಿದ್ಧಗೊಂಡಿದ್ದು, ಭಾನುವಾರ ಜುಲೈ 28 ರಂದು ಬೆಳಿಗ್ಗೆ 9.30 ರಿಂದ ಕಡಿಯಾಳಿ ದೇವಸ್ಥಾನದ ವಠಾರದ ಬಳಿಯ ಕಮಲ್ ಹೋಟೆಲ್ ಹಿಂದುಗಡೆ ಕೆಸರ್ದ ಗೊಬ್ಬು ಕ್ರೀಡಾಕೂಟವನ್ನು ಹಮ್ಮಿಕೊಂಡಿದೆ.
ನವರತ್ನ ಎಲೆಕ್ಟ್ರಿಕಲ್ ಕಡಿಯಾಳಿ ಇದರ ಮಾಲಕರಾದ ಭೀಮ್ ಸಿ೦ಗ್ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಲಿದ್ದು, ಡಾ. ಶಶಿಕಿರಣ್ ಉಮಾಕಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ ಅಧ್ಯಕ್ಷರಾದ ಪ.ವಸಂತ ಭಟ್ ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಕೆಸರ್ದ ಗೊಬ್ಬು  ಕ್ರೀಡಾಕೂಟವನ್ನು ನಡೆಸುತ್ತಿರುವ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಮಹಿಳೆಯರಿಗೆ , ಪುರುಷರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಓಟ, ಹಿಮ್ಮುಖ ಓಟ, ನಿಧಿ ಹುಡುಕಾಟ, ಪಾಳೆ ಎಳೆತ, ಜೋಡಿ ಓಟ, (ಕಾಲಿಗೆ ಹಗ್ಗ ಕಟ್ಟಿ ಓಡುವುದು) ಹಗ್ಗ ಜಗ್ಗಾಟ, ತ್ರೋಬಾಲ್ ಸಹಿತ ವಿವಿಧ ಸ್ಪರ್ಧೆಗಳನ್ನು ಸಾರ್ವಜನಿಕರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!