ಕಾರವಾರ ಸಮುದ್ರಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ನೀರುಪಾಲು

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸಮುದ್ರಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ಭಾನುವಾರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಧಾರವಾಡದ ಮಹಮದ್ ನವೀದ್ (17) ಮತ್ತು ನಯೀಮ್ ಹೆಬ್ಬಳ್ಳಿ (21) ಮೃತರು.ನಗರದ ಸಾಗರ ದರ್ಶನ ಹಾಲ್‌ನಲ್ಲಿ ಸಂಬಂಧಿಕರ ಆರತಕ್ಷತೆ ಕಾರ್ಯಕ್ರಮಕ್ಕೆ‌ ಬಂದಿದ್ದ ಅವರು ಸಮುದ್ರದಲ್ಲಿ ಈಜಲು ತೆರಳಿದ್ದರು.

ಸಮುದ್ರ ಪ್ರಕ್ಷುಬ್ಧವಾಗಿದೆ, ನೀರಿಗೆ ಇಳಿಯಬೇಡಿ ಎಂದು ಎಚ್ಚರಿಕೆ ನೀಡಿದರೂ ಕೇಳಲಿಲ್ಲ. ತಮಗೆ ಈಜು ಬರುತ್ತದೆ ಎಂದು ಹೇಳುತ್ತ ಸಮುದ್ರಕ್ಕಿಳಿದರು. ಆಗ ದೊಡ್ಡ ಅಲೆ ಬಂದು ಸೆಳೆದುಕೊಂಡು ಹೋಯಿತು ಎಂದು ಸಂಬಂಧಿಕರು ಹೇಳಿದ್ದಾರೆ.

ನೀರುಪಾಲಾದ ಮಹಮದ್ ನವೀದ್ ಶವ ಪತ್ತೆಯಾಗಿದ್ದು, ನಯೀಮ್ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.ಕಾರವಾರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!