ಎರಡು ತಲೆ ಹಾವು ಮಾರಾಟ ಯತ್ನ : ಕಾರು ಸಹಿತ ಇಬ್ಬರ ಬಂಧನ

ಮಡಿಕೇರಿ: ಎರಡು ತಲೆ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳ ವಿರಾಜಪೇಟೆ ಸಮೀಪ ಪೆರುಂಬಾಡಿಯಲ್ಲಿ ಬಂಧಿಸಿದೆ. ವಿರಾಜಪೇಟೆ ಗ್ರಾಮಾಂತರ ಪ್ರದೇಶದ ಪೆರುಂಬಾಡಿ ಎಂಬಲ್ಲಿ ನಾಲ್ಕು ಅಡಿ ಉದ್ದ ಮತ್ತು ನಾಲ್ಕು ಕೆ.ಜಿ ತೂಕವಿರುವ ಎರಡು ತಲೆ ಹಾವನ್ನು ಕೊಡಗಿನ ಗಡಿಭಾಗದಿಂದ ಕೇರಳ ರಾಜ್ಯಕ್ಕೆ ಮಾರಾಟ ಮಾಡಲು ಯತ್ನಿಸುತಿದ್ದ ಮೂಡಬಿದ್ರೆ ನಿವಾಸಿ ಶೇಕ್ ಅಮೀರ್ ಶಾಹೀಬ್, ಉಡುಪಿ ಜಿಲ್ಲೆಯ ನಿವಾಸಿ ಸುಹೇಲ್ ಅಹ್ಮದ್ ಹಾಗೂ ಜುಹೇರ್ ಅವರುಗಳೇ ಬಂಧಿತ ಆರೋಪಿಗಳು. ಬಂಧಿತರಿಂದ ಹಾವು ಸಹಿತ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅರಣ್ಯ ಸಂಚಾರಿ ದಳಕ್ಕೆ ದೊರೆತ ಖಚಿತ ಮಾಹಿತಿಯ ಮೇರೆಗೆ ಖರೀದಿದಾರರ ಸೋಗಿನಲ್ಲಿ ಸ್ಥಳಕ್ಕೆ ತೆರಳಿದ ಸಿಬ್ಬಂದಿಗಳು ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಂಗ ಬಂಧನಕ್ಕೆ ಹಾಜರು ಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿದಳದ ಅರಣ್ಯ ಘಟಕದ ಪೊಲೀಸ್ ವರಿಷ್ಟಾಧಿಕಾರಿ ಎಸ್.ಎಸ್.ಕಾಶಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಸಂಚಾರಿದಳದ ಠಾಣಾಧಿಕಾರಿ ಹೆಚ್.ಸಿ.ಸಣ್ಣಯ್ಯ, ಸಿಬ್ಬಂದಿಗಳಾದ ಕೆ.ಬಿ.ಸೋಮಣ್ಣ, ಟಿ.ಪಿ.ಮಂಜುನಾಥ್, ಎಂ.ಬಿ.ಗಣೇಶ್, ಪಿ.ಬಿ.ಮೊಣ್ಣಪ್ಪ, ಸಿ.ಎಂ.ರೇವಪ್ಪ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!