ಕಾರ್ಕಳ ಸುಂಟರಗಾಳಿ ಲಕ್ಷಾಂತರ ರೂ. ನಷ್ಟ

ಕಾರ್ಕಳ : ತಾಲೂಕಿನಾದ್ಯಾಂತ ಇಂದು ಬೆಳಿಗ್ಗೆ ಸುಂಟರಗಾಳಿಯಿಂದ ಮನೆ, ತೋಟ, ದೇವಸ್ಥಾನ , ವಿದ್ಯುತ್ ಕಂಬಗಳಿಗೆ ಹಾನಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕಾರ್ಕಳದ ನಕ್ರೆ ಭಾಗದ ಜನರು ಭಯಬೀತರಾಗಿ ಬೆಚ್ಚಿ ಬಿದ್ದಿರುವ ಘಟನೆ ನಡೆದಿದೆ.

ಗುರುವಾರ ಬೆಳಿಗ್ಗೆ 9 ಗಂಟೆ ಹೊತ್ತಿಗೆ ಇದಕ್ಕಿಂತಂತೆ ನಕ್ರೆ ಭಾಗದಲ್ಲಿ ಕಾರ್ಮೋಡ ಅವರಿಸಿತ್ತು, ಅಷ್ಟರಲ್ಲಿ ಜೋರಾಗಿ ಬೀಸಿದ ಸುಂಟರಗಾಳಿಗೆ ಅಪಾರ ಪ್ರಮಾಣದಲ್ಲಿ ಸೊತ್ತು ಹಾನಿಗೊಳಗಾಗಿದೆ. ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಳದ ಬಳಿಯ ನಿವಾಸಿಯಾದ ಮೋನಪ್ಪ ಎಂಬವರ ಮನೆ ಸುಂಟರಗಾಳಿಯಿಂದ ಹಾನಿಗೊಳಿಗಾಗಿದೆ. ಅಲ್ಲಿಂದ ಕುಂಬ್ರಪದವು ವರೆಗಿನ ಸುಮಾರು 10ಕ್ಕು ಮಿಕ್ಕಿ ಮನೆಗಳು ಭಾಗಶಃ ಹಾನಿಗೊಳಗಾಗಿದೆ.

ತೋಟದಲ್ಲಿದ್ದ ಫಲವತ್ತಾದ ಅಡಿಕೆ,ಬಾಳೆ ಗಿಡಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಆಲದ ಮರ, ಮಾವಿನ ಮರ ಬುಡಸಮೇತ ಕಿತ್ತು ಬಿದ್ದಿದೆ. ಮನೆಯ ಹೆಂಚುಗಳು, ಸಿಮೆಂಟ್ ಸೀಟ್‌ಗಳು ದೂರ ಕೆಸೆಯಲ್ಪಟ್ಟಿದೆ. 10ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ತುಂಡರಿಸಿ ಧರೆಗುರುಳಿದೆ. ಪ್ರಾಥಮಿಕ ವರದಿಯ ಪ್ರಕಾರ 10 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಗ್ರಾಮಕರಣಿಕ ಶಿವಪ್ರಸಾದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!