ಉಡುಪಿ ಜಿಲ್ಲೆಯ ಮೂವರು ಕೊರೋನಾ ಸೋಂಕಿತರು ಗುಣಮುಖ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ಕೊರೊನಾಗೆ ತುತ್ತಾದ ಮೂವರು ಮಂದಿ ಚಿಕಿತ್ಸೆಗೆ ಸ್ಪಂದಿಸುವ ಮೂಲಕ ಗುಣಮುಖರಾಗುವ ಹಾದಿಯಲ್ಲಿ ಇದ್ದಾರೆ. ಅವರ ಸಂಪರ್ಕಕ್ಕೆ ಇದ್ದ ಎಲ್ಲರನ್ನೂ ಗುರುತಿಸಿ ಪ್ರತ್ಯೇಕವಾಗಿ ನಿಗಾದಲ್ಲಿ ಇರಿಸಿ ಸೂಕ್ತವಾಗಿ ಚಿಕಿತ್ಸೆ ನೀಡಿ ಅವರಿಗೂ ಕೋವಿಡ್-೧೯ ಸೋಂಕು ತಗುಲುವ ಅಪಾಯ ದೂರವಾಗಿದೆ.‌

ತನ್ಮೂಲಕ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಭೀತಿ ದೂರವಾಗಿರುವ ಹಿನ್ನೆಲೆಯಲ್ಲಿ ಹೊರಗಿನಿಂದ ಉಡುಪಿ ಜಿಲ್ಲೆಗೆ ಬರುವ ವ್ಯಕ್ತಿಗಳಿಂದ ಸೋಂಕು ಹರಡುವ ಸಂಭವವಿರುವ ಕಾರಣದಿಂದ ಉಡುಪಿ ಜಿಲ್ಲೆಯ ಗಡಿಯನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ರವರು ಇಂದು  ಸ್ಪಷ್ಟಪಡಿಸಿದ್ದಾರೆ.


ಗಡಿ ಸೀಲ್ ಆಗಿರುವ ಕಾರಣದಿಂದ ಉಡುಪಿ ಜಿಲ್ಲೆಯಿಂದ ಯಾರೂ ಕೂಡ ಹೊರಗೆ ಹೋಗುವುದನ್ನು ಮತ್ತು ಹೊರಗಿನಿಂದ ಉಡುಪಿ ಜಿಲ್ಲೆಯನ್ನು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

1 thought on “ಉಡುಪಿ ಜಿಲ್ಲೆಯ ಮೂವರು ಕೊರೋನಾ ಸೋಂಕಿತರು ಗುಣಮುಖ: ಜಿಲ್ಲಾಧಿಕಾರಿ

  1. Sir,
    After 14 April remove the lock down .
    With some conditions like , closing all the borders of our district.
    Free up our district .

Leave a Reply

Your email address will not be published. Required fields are marked *

error: Content is protected !!