ಉಡುಪಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ತೀವ್ರ ತಪಾಸಣೆ : ರಾಜ್ಯದಲ್ಲಿ ಉಗ್ರರ ದಾಳಿ ಬೆದರಿಕೆ

ಉಡುಪಿ : ರಾಜ್ಯದಲ್ಲಿ ಉಗ್ರರ ದಾಳಿ ಬೆದರಿಕೆ ಉಡುಪಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ತೀವ್ರ ತಪಾಸಣೆ .

ರಾಜ್ಯಕ್ಕೆ ಉಗ್ರರ ದಾಳಿಯ ಬೆದರಿಕೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಘೋಷಿಸಿದ ಹೈ ಅಲರ್ಟ್‌ಗೆ ಉಡುಪಿಯ ಪ್ರಮುಖವಾದ ಸ್ಥಳವಾದ ಶ್ರೀಕೃಷ್ಣಮಠ, ಮಣಿಪಾಲ ವಿಶ್ವವಿದ್ಯಾನಿಲಯ,  ಬಸ್ ನಿಲ್ದಾಣ ,ಸಿಟಿ ಸೆಂಟರ್, ಬಿಗ್ ಬಜಾರ್, ಯುಪಿಸಿಎಲ್, ಮಲ್ಪೆ ಹಾಗೂ ಗಂಗೊಳ್ಳಿ ಬಂದರು ಸಹಿತ ಹಲವಾರು ಜನ ದಟ್ಟಣೆ ,ಪ್ರೇಕ್ಷಣೀಯ ಸ್ಥಳಗಳ ಪರಿಶೀಲನೆಯನ್ನು ಇಂದು ಉಡುಪಿ ಜಿಲ್ಲಾ ಪೊಲೀಸರು ನಡೆಸಿದರು.

ವಿಧ್ವಂಸಕ ಕೃತ್ಯ ತಡೆ ಹಾಗೂ ಕರಾವಳಿ ಕಾವಲು ಪಡೆ ಸಿಬಂದಿಗಳು ಇಂದು ನಗರದ ಹಲವಾರು ಕಡೆ ತಪಾಸಣೆ ನಡೆಸಿದ್ದಾರೆ.

ಯಾರದರೂ ಸಂಶಯಾಸ್ಪದವಾಗಿ ಕಂಡರೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಬೇಕಾಗಿ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!