ಬಿಜೆಪಿ ನಾಯಕರೇ ಇದು ಹಿಂದುತ್ವದ ಪರ ನಿಲ್ಲುವ ಕಾಲವಲ್ಲ:ಅನ್ಸಾರ್ ಅಹಮದ್

ಉಡುಪಿ: ಕೊರೋನಾ ವೈರಸ್ ನಿಂದ ಇಡೀ ದೇಶವೇ ಲಾಕ್ ಡೌನ್  ಆಗಿದ್ದು ಸಮಸ್ತ ಭಾರತೀಯರು ಒಂದಲ್ಲ ಒಂದು ಕಾರಣಗಳಿಂದಾಗಿ ಸಮಸ್ಯೆಯಲ್ಲಿ ಸಿಲುಕಿರುತ್ತಾರೆ.  ಕೊರೋನಾದಿಂದ ಸತ್ತವರು ಹಲವರಿದ್ದರೆ, ಹಸಿವಿನಿಂದ ಸತ್ತವರು ಕೆಲವರಿದ್ದಾರೆ.

 ದೇಶದಲ್ಲಿ ಇಂತಹ ಸನ್ನಿವೇಶ ಇರುವಾಗ ಕಳೆದ ಎರಡು ದಿನಗಳಿಂದ ಹಲವಾರು ಬಿಜೆಪಿ ನಾಯಕರುಗಳು ಹಾಗೂ ಸಂಘ ಪರಿವಾರದ ಮುಂದಾಳುಗಳು ಒಂದು ಸಮುದಾಯದವನ್ನು ಕೀಳಾಗಿಸುವ ಉದ್ದೇಶದಿಂದ  ಹಿಂದುತ್ವದ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.ಇದು ಅಂತಹ  ನಾಯಕರುಗಳಿಗೆ ಶೋಭೆ ತರುವಂತದ್ದಲ್ಲ.
 
     ಮಾತು ಮಾತಿಗೆ ಹಿಂದುತ್ವ ಎನ್ನುವವರು ಮೊದಲು ತನ್ನ ಹಿಂದೂ ಸಹೋದರನ ಮನೆಯಲ್ಲಿರುವ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಿ. ಹಲವಾರು ಹಿಂದೂ ಸಹೋದರರ ಮನೆಯಲ್ಲಿ ಲಾಕ್ ಡೌನ್  ಆದ ನಂತರ ಅಕ್ಕಿ ಬೇಳೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಸಾಧ್ಯವಾದರೆ ಅಂತವರ ಪರಿಸ್ಥಿತಿಗೆ ನೆರವಾಗಿ.  

 ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ತಾವುಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಹಿಂದುತ್ವ ಹಿಂದುತ್ವ ಅಂತ ಹೇಳಿಕೆಗಳನ್ನು ಕೊಡುವುದು ನೀವುಗಳು ಆರಾಧಿಸುವ ಭಗವಂತನೂ ಮೆಚ್ಚಲಾರ ಎಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!