ಬ್ಯಾಂಕ್ ಲೋನ್ ಗೆ ಹೋದವ ಕೋಟ್ಯಧಿಪತಿಯಾದ!

ಕಣ್ಣೂರು: ಹಿಂದೆ ಮಾಡಿದ್ದ ಮೂರು ಸಾಲ ಇನ್ನೂ ತೀರಿಸಿರಲಿಲ್ಲ, ಹೀಗಿದ್ದರೂ ನಾಲ್ಕನೇ ಬಾರಿಗೆ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಹೋಗುತ್ತಿದ್ದ ವ್ಯಕ್ತಿಗೆ ತಿಳಿದಿರಲಿಲ್ಲ, ಅತಿ ಶೀಘ್ರದಲ್ಲಿಯೇ ನಾನು ಕೋಟ್ಯಾಧಿಪತಿ ಆಗುತ್ತೇನೆಂದು,  ಆತ ಎಣಿಸಿರಲಿಲ್ಲ. 

ಕೇರಳದ ಕುರುಚಿಯಾ ರಾಜನ್  ಅವರಿಗೆ 12 ಕೋಟಿ ರು ಲಾಟರಿ ಹಣ ಬಂದಿದೆ, ತಮ್ಮ ಮನೆಯ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿತ್ತು, ಮಗಳ ಮದುವೆಗೂ ಕೂಡ ಸಾಲ ಮಾಡಿದ್ದರು, ಹೀಗಾಗಿ 3 ನೇ ಬಾರಿಗೆ ಬ್ಯಾಂಕ್ ನಲ್ಲಿ ಸಾಲ  ಮಾಡಲು ಹೊರಟಿದ್ದರು. ಹೊರಡುವ ಮುನ್ನ 300 ರೂ ಕೊಟ್ಟು  ಲಾಟರಿ ಟಿಕೆಟ್ ಖರೀದಿಸಿದ್ದರು.  ಅದನ್ನು ಯಾರೋಂದಿಗೂ ಹೇಳಿರಲಿಲ್ಲ.

ಯಾವಾಗಲೂ ಯಾಟರಿ ಖರೀದಿ ಮಾಡುತ್ತಿದ್ದರಿಂದ ನನ್ನ ಹೆಂಡತಿ ನನ್ನ ಜೊತೆ ಜಗಳವಾಡುತ್ತಿದ್ದಳು.  ಮಂಗಳವಾರ ಬೆಳಗ್ಗೆ ಕುತೂಹಲದಿಂದ ನೋಡಿದೆ,  ಆಗ ತಿಳಿಯಿತು ನನ್ನ ಬದುಕಿನ ಗತಿಯೇ ಬದಲಾಯಿತು ಎಂದು ರಾಜನ್ ತಿಳಿಸಿದ್ದಾರೆ.

ಇನ್ನೂ ಲಾಟರಿಯಿಂದ ಹಣ ಬಂದಿದ್ದರಿಂದ ನನಗೆ ಅಪಾರ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಅವರ ಕುಟುಂಬಸ್ಥರು ಸಂತೋಷ ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!