ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತೆ – ಸಿಎಂ ಆಪ್ತ ಶರವಣ ಹೇಳಿಕೆ

ಮಂಗಳೂರು: ಎರಡು ಶಾಸಕರ ರಾಜೀನಾಮೆ ಊರ್ಜಿತ ಆಗಲ್ಲ ಎಂದು ವಿಧಾನ ಪರುಷತ್ ಸದಸ್ಯ, ಸಿಎಂ ಆಪ್ತ ಶರವಣ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೇಳಿಕೆ ನೀಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತೆ ಸಿಎಂ ಕುಮಾರಸ್ವಾಮಿ ಇದಕ್ಕೆ ಏನೇನು ಬೇಕು ಅದೆಲ್ಲಾ ಮಾಡಿದ್ದಾರೆ.

ರಾಜೀನಾಮೆಯನ್ನು ನಿಯಮಗಳನ್ನು ಪಾಲಿಸಿ ನೀಡಿಲ್ಲ, ಕಾಂಗ್ರೆಸ್ ಪಕ್ಷ ಅವರ ಶಾಸಕರನ್ನು ಮನವಲಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತು ಜೆಡಿಎಸ್‌ನ ಎಲ್ಲಾ ಶಾಸಕರು ಕೂಡ ದೇವೆಗೌಡರ ಸಂಪರ್ಕದಲ್ಲಿದ್ದಾರೆ. ಆದ್ರೆ ಬಿಜೆಪಿಯವರು ಸರ್ಕಾರ ಅದಾಗೆ ಬೀಳುತ್ತೆ ಅಂತ ಹೇಳಿಕೊಂಡು ಕುರ್ಚಿಯ ಜಪ ಮಾಡುತ್ತಿದ್ದಾರೆ. ದೇವರ ಆಶೀರ್ವಾದ ಇರುವವರೆಗೂ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!