ಕರೋನಾ ವೈರಸ್ ದಾಳಿ ಮಾಡುವಾಗ ಕಾಂಗ್ರೆಸ್-ಬಿಜೆಪಿ ನೋಡೋದಿಲ್ಲ- ಖಾದರ್ ಹೇಳಿಕೆಗೆ ಶೋಭಾ ತಿರುಗೇಟು

ಉಡುಪಿ – ಕರೋನಾ ವೈರಸ್ ದಾಳಿ ಮಾಡುವಾಗ ಕಾಂಗ್ರೆಸ್-ಬಿಜೆಪಿ ನೋಡೋದಿಲ್ಲ ಸೋಂಕಿಗೆ ಒಳಗಾದರೆ ಎಲ್ಲರಿಗೂ ಸಾವು ಕಟ್ಟಿಟ್ಟ ಬುತ್ತಿ ಹೀಗಾಗಿ ಇದರ ವಿರುದ್ಧ ಕಾರ್ಯಾಚರಣೆಯ ಬಗ್ಗೆ ಕೊಂಕು ಮಾತನಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಯುಟಿ ಖಾದರ್ ಅವರಿಗೆ ತಿರುಗೇಟು ನೀಡಿದ್ದಾರೆ .
ನಿನ್ನೆ ಕಾಂಗ್ರೆಸ್ ನಾಯಕ ಯುಟಿ ಖಾದರ್ ಅವರು ಪ್ರಧಾನಿಯವರು ಕರೆ ನೀಡಿರುವ ಜನತಾ ಕರ್ಫ್ಯೂವನ್ನು ಟೀಕಿಸಿ ಹೇಳಿಕೆ ನೀಡಿದ್ದರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಈ ಮಹಾಮಾರಿಯ ವಿರುದ್ಧ ಒಂದು ರೀತಿಯಲ್ಲಿ ಯುದ್ಧ ನಡೆಯುತ್ತಿದೆ ಈಗ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯವನ್ನು ಮರೆತು ಇದರಲ್ಲಿ ಎಲ್ಲರೊಂದಿಗೆ ಕೈಜೋಡಿಸಬೇಕು ವಿರೋಧ ಪಕ್ಷಗಳ ಟೀಕೆ ರಚನಾತ್ಮಕವಾಗಿ ಇರಬೇಕೆ ಹೊರತು ಪೂರ್ವಗ್ರಹ ಪೀಡಿತವಾಗಿ ಇರಬಾರದು ಎಂದು ಅವರು ಹೇಳಿದರು. ಭಾನುವಾರದ ದಿನ ಜನರು ಶಾಪಿಂಗ್ ಮತ್ತು ಪ್ರವಾಸಕ್ಕೆ ಹೆಚ್ಚು ತೆರಳುವ ಕಾರಣ ಭಾನುವಾರದ ದಿನ ಎಲ್ಲರೂ ಮನೆಯಲ್ಲಿರುವಂತೆ ಪ್ರಧಾನಿಯವರು ಮನವಿ ಮಾಡಿದ್ದಾರೆ ಇದರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ನಮಗೆ ನಾವೇ ನಿಯಂತ್ರಣವನ್ನು ಹೇಳಿಕೊಂಡರೆ ಮಾತ್ರ ಈ ರೋಗವನ್ನು ತಡೆಗಟ್ಟಬಹುದು ಎಂದು ಅವರು ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!