ತಮಾಷೆಗಾಗಿ ಬಸ್ಸನ್ನೇ ಕದ್ದು ಪೊಲೀಸರ ಅತಿಥಿಯಾದ

ಉಡುಪಿ: ಯುವಕನೊರ್ವ ತಮಾಷೆಗಾಗಿ ರಾತ್ರಿ ನಿಲ್ಲಿಸಿದ್ದ ಬಸ್ಸನ್ನು ಚಲಾಯಿಸಿಕೊಂಡು ಹೋಗಿ ಸಿಕ್ಕಿ ಬಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿರುವ 45 ಸಿ ನಂಬರಿನ ಸಿಟಿ ಬಸ್ಸನ್ನು ಮಹಮ್ಮದ್ ಇಫಾಜ್ (21) ಎಂಬ ಯುವಕ ಉಳ್ಳಾಲದಿಂದ ಉಡುಪಿವರೆಗೆ ಬರೋಬ್ಬರಿ 87 ಕಿ.ಮೀ. ಚಲಾಯಿಸಿಕೊಂಡು ಬಂದಿದ್ದ. ಮಂಗಳೂರಿನ ಸಿಟಿ ಬಸ್ಸೊಂದು ಉಡುಪಿಯಲ್ಲಿ ಪ್ರಯಾಣಿಕರಿಲ್ಲದೆ ಹೋಗುತ್ತಿರುವುದನ್ನು ನೋಡಿ ಸಂಶಯಗೊಂಡ ಬಸ್ಸಿನ ಮಾಲಕರಿಗೆ ಮಾಹಿತಿ ನೀಡಿದ್ದಾರೆ. ಆವಾಗಲೇ ಮಾಲಕರಿಗೆ ಬಸ್ ಕಳವಿನ ಮಾಹಿತಿ ಸಿಕ್ಕಿತು. ತಕ್ಷಣ ಮಾಲಕ ಅಶ್ರಫ್ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದರು.


ಉಡುಪಿ ದಾಟಿ ಅಂಬಾಗಿಲು ಕಡೆಯಿಂದ ಸಂತೆಕಟ್ಟೆಗೆ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಬಸ್ಸನ್ನು ತಡೆದು ನಿಲ್ಲಿಸಿದ ಸಾರ್ವಜನಿಕರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಾಮಿಸಿದ ಪೊಲೀಸರು ಯುವಕನನ್ನು ಮತ್ತು ಬಸ್ಸನ್ನು ವಶಕ್ಕೆ ಪಡೆದುಕೊಂಡರು.
ಇಫಜ್‌ನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿ ಯಾವ ಕಾರಣಕ್ಕೆ ಬಸ್ಸನ್ನು ಚಲಾಯಿಸಿಕೊಂಡು ಬಂದಿದ್ದಾಗಿ ಉಳ್ಳಾಲ ಪೊಲೀಸರು ತಿಳಿಸಬೇಕಾಗಿದೆ.

1 thought on “ತಮಾಷೆಗಾಗಿ ಬಸ್ಸನ್ನೇ ಕದ್ದು ಪೊಲೀಸರ ಅತಿಥಿಯಾದ

Leave a Reply to Vijay Deeraj Cancel reply

Your email address will not be published. Required fields are marked *

error: Content is protected !!