ಹಸಿದವರಿಗೆ ಊಟ ಬಡಿಸುವ ಮೂಲಕ ಮಾನವೀಯತೆ ಮೆರೆದ ಪರಿವರ್ತನಾ ಫೌಂಡೇಶನ್

ಉಡುಪಿ -(ಉಡುಪಿ ಟೈಮ್ಸ್ ವರದಿ ) ಬಿಜೆಪಿ ಕಾಪು ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಪರಿವರ್ತನಾ ಫೌಂಡೇಶನ್ ಸಹಯೋಗದೊಂದಿಗೆ ಕರೋನಾ ಎಮರ್ಜನ್ಸಿ ಸಂದರ್ಭದಲ್ಲಿ ಸುಮಾರು 600 ಕ್ಕೂ ಹೆಚ್ಚು ಜನರಿಗೆ ಆಹಾರ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಣಿಪಾಲ ಆರಕ್ಷರ ಠಾಣೆಯಲ್ಲಿ ಆಹಾರವನ್ನು ನೀಡಿ ನಂತರ ಕಾಪು ಕ್ಷೇತ್ರದಲ್ಲಿ ಅನೇಕ ಜನ ಹಸಿದವರಿಗೆ ಅನ್ನನೀಡಿದರು . ಪ್ರಗತಿನಗರ ಹಾಗೂ ಅಲೆವೂರಿನಲ್ಲಿ ಪಣಿಯಾಡಿಯಲ್ಲಿ ಉತ್ತರ ಭಾರತದವರಿಗೆ ಊಟದ ವ್ಯವಸ್ಥೆ ಮಾಡಿದರು .ಶಿರ್ವದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಊಟ ನೀಡಲಾಯಿತು. ಹಲವಾರು ಮನೆಗಳಿಗೆ ಭೇಟಿ ನೀಡಿ ಆಹಾರ ನೀಡಲಾಯಿತು. ಮೂಳೂರಿನಲ್ಲಿ ಅಪಘಾತಕ್ಕೆ ಒಳಗಾಗಿ‌ಕಷ್ಟಪಡುತ್ತಿರುವ ಮನೆಗೆ ಹಾಗೂ ಅಲ್ಲಿಯೇ ಇನ್ನೊಂದು ಬಡವರ ಮನೆಗೆ ಅಕ್ಕಿ ಹಾಗೂ ಬೇಳೆ ನಿಡಿ ಮಾನವೀಯತೆ ಮೆರೆದರು.


ನಮ್ಮ ಈ ಕಾರ್ಯಕ್ಕೆ ಅನೇಕ ಜನ ಕೈ ಜೋಡಿಸಿದ್ದಾರೆ ಅದರಲ್ಲೂ ಅಲೆವೂರು ಯುವಕ ಸಂಘ ಅಲೆವೂರು ಮಹಿಳಾ ಸಂಘದ ಕಟ್ಟದಲ್ಲಿ ಆಹಾರ ಗಳನ್ನೂ ತಯಾರಿಸಲಾಯಿತು ಹಾಗು ಸಾಧನ ಯುವಕ ಮಂಡಾಳ ಹಾಗು ಯುವತಿ ಮಂಡಲದ ಸದಸ್ಯರು ಊಟಗಳನ್ನು ತಯಾರಿಸಿದರು, ಈ ಕಾರ್ಯಕ್ಕೆ ಪರಿವರ್ತನಾ ಫೌಂಡೇಶನ್ ಕೈ ಜೋಡಿಸಿದ್ದು ಅದರ ಅಧ್ಯಕ್ಷರಾದ ಮೋಹನ್ ಭಟ್ ಹಾಗೂ ಅವರ ಪತ್ನಿ ಹಾಗೂ ಸ್ವಯಂ ಸೇವಕರೊಂದಿಗೆ ಅನೇಕ ಜನರಿಗೆ ಆಹಾರ ನೀಡಲು ಅವಕಾಶ ಮಾಡಿ ಕೊಟ್ಟರು ಹಾಗು ತಾಲೂಕು ಪಂಚಾಯತ್ ಸದಸ್ಯರಾದ ಕೇಶವ ಮೊಯ್ಲಿ ಹಾಗು ದಿನೇಶ್, ರಾಘವೇಂದ್ರ ಹೀಗೆ ನಮ್ಮ ಎಲ್ಲ ಕಾರ್ಯಕರ್ತರು ಈ ಕಾರ್ಯದಲ್ಲಿ ಕೈ ಜೋಡಿಸಿದರು ಎಂಬುದಾಗಿ ಶ್ರೀಕಾಂತ್ ನಾಯಕ್ ಉಡುಪಿ ಟೈಮ್ಸ್ ಗೆ ತಿಳಿಸಿದರು

Leave a Reply

Your email address will not be published. Required fields are marked *

error: Content is protected !!