ಆಷಾಡ ಮಾಸದ ಮೊದಲ ಪಂಚಮಿ ಕುಕ್ಕೆ ಕ್ಷೇತ್ರದಲ್ಲಿ ಜನಜಂಗುಳಿ

ಸುಬ್ರಹ್ಮಣ್ಯ:- ಆಷಾಡ ಮಾಸದ ಮೊದಲ ಪಂಚಮಿ ತಿಥಿ ವಿಶೇಷವಾಗಿದ್ದು ಕರಾವಳಿಯ ನಾಗಾರಾಧನ ಕ್ಷೇತ್ರಗಳಿಗೆ ಭಕ್ತರು ನಿನ್ನೆಯ ದಿನ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನಿನ್ನೆ ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಕಂಡುಬಂದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ,ಹೊರರಾಜ್ಯಗಳಿಂದ ಆಗಮಿಸಿದ ಭಕ್ತರು ಶ್ರೀ ದೇವರ ದರ್ಶನ ಪಡೆದು ವಿವಿಧ ಸೇವೆಗಳನ್ನು ಪೂರೈಸಿದರು.

ನಿನ್ನೆ ಭಾನುವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 30,000 ಭಕ್ತರು ಭೇಟಿ ನೀಡಿದ್ದು 1,100 ಆಶ್ಲೇಷಾ ಬಲಿ ಸೇವೆ,199ಸರ್ಪ ಸಂಸ್ಕಾರಗಳು,450 ಶೇಷಸೇವೆಗಳು,150ನಾಗಪ್ರತಿಷ್ಟೆ,98ತುಲಾಭಾರ ಸೇವೆಗಳು ನಡೆದಿವೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!