ಉಪ ಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ

ಸುಪ್ರೀಂಕೋರ್ಟ್‌ನಲ್ಲಿ ಗುರುವಾರ ಅನರ್ಹ ಶಾಸಕರ ಮೇಲ್ಮನವಿ ವಿಚಾರಣೆ ನಡೆಯಿತು. ವಕೀಲರ ವಾದ ವಿವಾದ ಆಲಿಸಿದ ತ್ರಿಸದಸ್ಯ ಪೀಠ ಉಪ ಚುನಾವಣೆ ಪ್ರಕ್ರಿಯೆಯನ್ನು ಮುಂದೂಡಿದೆ. ಅನರ್ಹ ಶಾಸಕರ ಪ್ರಕರಣವನ್ನು ಸಾಂವಿಧಾನಿಕ ಪೀಠ ಪರಾಮರ್ಶೆ ನಡೆಸಬೇಕಿದೆ ಎಂದು ಪೀಠ ತಿಳಿಸಿದೆ. ಚುನಾವಣೆ ಮುಂದೂಡಿ ಈ ಪ್ರಕರಣದ‌ ಕುರಿತು‌‌ ವಿಸ್ತೃತ ವಿಚಾರಣೆ ನಡೆಸಲು ಮುಂದಿನ ವಾರ ನಿರ್ಧಾರ.

ಅಕ್ಟೋಬರ್ 22ರಿಂದ ಪ್ರಕರಣದ ವಿಸ್ತೃತ ವಿಚಾರಣೆ ಆರಂಭಿಸಲು ನ್ಯಾಯ ಪೀಠದ ನಿರ್ಧಾರ. ಪ್ರಕರಣದ ‌ತೀರ್ಪು ಹೊರ‌ ಬೀಳುವವರೆಗೆ ಉಪ ಚುನಾವಣೆಯನ್ನು ಮುಂದೂಡಬಹುದು ಎಂಬ ಆಯೋಗದ ಕೋರಿಕೆಯ ಮೇರೆಗೆ ಚುನಾವಣೆ‌ ಮುಂದೂಡಲು ಸುಪ್ರೀಂ ಕೋರ್ಟ್ ಸೂಚನೆ. 
 

Leave a Reply

Your email address will not be published. Required fields are marked *

error: Content is protected !!