ಮೀನುಗಾರಿಕೆ ಇಲ್ಲದೆ ಸಾಲ ಮರು ಪಾವತಿಸಲಾಗದೆ ಆತ್ಮಹತ್ಯೆ

ಕೋಟ: ಪ್ರಾಕೃತಿ ವಿಕೋಪದಿಂದ ಮೀನುಗಾರಿಕೆ ಇಲ್ಲದೆ ಮಾಡಿದ ಸಾಲ ಮರು ಪಾವತಿಸಲಾಗದೆ ನೊಂದ ಮೀನುಗಾರನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟತಟ್ಟು ಪಡುಕೆರೆಯಲ್ಲಿ ನಡೆದಿದೆ.


ಮೃತ ದೇವ ಬಂಗೇರ (50) ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಮೀನುಗಾರಿಕೆ ಕೆಲಸಕ್ಕೆ ಸಂಬಂಧಿಸಿದಂತೆ ಸಲಕರಣೆ ಖರೀದಿಗೆ ಹಾಗೂ ಜೀವನ ಸಾಗಿಸಲು ಸ್ಥಳೀಯರಿಂದ ಸಾಲ ಮಾಡಿಕೊಂಡಿದ್ದು ಇತ್ತೀಚೆಗೆ ಪ್ರಾಕೃತಿಕ ವಿಕೋಪದ ಕಾರಣ ಮೀನುಗಾರಿಕೆ ಕೆಲಸ ಇಲ್ಲದೇ ಮನೆಯಲ್ಲೇ ಇದ್ದರು. ಮಾಡಿದ ಕೈಸಾಲ ತೀರಿಸಲು ಸಾಧ್ಯವಾಗದೇ ಯಾವಾಗಲೂ ಚಿಂತೆಯಲ್ಲಿ ಇರುತ್ತಿದ್ದರು.

ಇಂದು ಬೆಳಿಗ್ಗೆ ಪತ್ನಿ ಗುಲಾಬಿ ಕೂಲಿ ಕೆಲಸಕ್ಕೆ ಹಾಗೂ ಕಿರಿಯ ಮಗಳು ಶಾಲೆಗೆ ಹೋಗಿದ್ದ ಸಂದರ್ಭ ಕಿಟಕಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಾಗ ದೇವ ಬಂಗೇರರವರು ಮನೆಯ ಕೋಣೆಯಲ್ಲಿ ನೇಣು ಹಾಕಿರುವುದನ್ನು ನೋಡಿ ಬೊಬ್ಬೆ ಹಾಕಿ ಇನ್ನೊಬ್ಬಳು ಮಗಳು ಹಾಗೂ ನೆರೆಕೆರೆಯವರನ್ನು ಕರೆದು ಹಗ್ಗವನ್ನು ಬಿಚ್ಚಿ ಪರಿಶೀಲಿಸಿದಾಗ ಆದಾಗಲೇ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾಗಿ ಪತ್ನಿ ಕೋಟಾ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!