ಮಾನಸಿಕ ಸ್ಥಿಮಿತ ಕಳೆದುಕೊಂಡ ಸಿದ್ದರಾಮಯ್ಯ: ಶೋಭಾ

ಉಡುಪಿ – ಅಧಿಕಾರ ಕಳೆದುಕೊಂಡ ನಂತರ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತವನ್ನೂ ಕಳ್ಕೊಂಡಿದ್ದಾರೆ ಎಂಬುದಾಗಿಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು ಉಡುಪಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತ ಅವರು ಬಿಜೆಪಿ- ಜೆಡಿಎಸ್ ಒಳ‌ಒಪ್ಪಂದ ಸಿದ್ದರಾಮಯ್ಯ ಹೇಳಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಕಾಂಗ್ರೇಸ್ ನ್ನು ಬ್ಲಾಕ್ ಮೇಲ್ ಮಾಡಿ ವಿಪಕ್ಷದ ನಾಯಕರಾಗಿದ್ದಾರೆ, ಕಾಂಗ್ರೆಸ್ ಪಕ್ಷದ ಮೇಲೆ ಸಿದ್ದರಾಮಯ್ಯ ಗೆ ಯಾವುದೇ ಹಿಡಿತ ಇಲ್ಲ , ಕಾಂಗ್ರೆಸ್ ನಲ್ಲಿ ಅನೇಕ ಬಣಗಳಾಗಿವೆ, ಸಿದ್ದರಾಮಯ್ಯ ಬಣ, ಜೆಡಿಎಸ್ ನಿಂದ ಬಂದವರ ಬಣ, ಪರಮೇಶ್ವರ್ ಬಣ, ಡಿ.ಕೆ.ಶಿ ದ್ದು ಬೇರೆಯೇ ಬಣ ಈ ಬಣಗಳನ್ನು ನಿಭಾಯಿಸಲಾಗದೆ ಬಾಯಿಗೆ ಬಂದದ್ದು ಮಾತಾಡ್ತಾರೆ , ಬಿಜೆಪಿ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೆ ಏಕಾಂಗಿಯಾಗಿಯೇ ಉಪ ಚುನಾವಣೆಯನ್ನು ಗೆಲ್ಲುತ್ತೆ ,ಮೂರುವರೆ ವರ್ಷಗಳ ಕಾಲ ಬಿಜೆಪಿಯೇ ಆಡಳಿತ ಮಾಡುತ್ತೆ ಎಂಬುದಾಗಿ ಭವಿಷ್ಯ ನುಡಿದರು

ಸಿದ್ದರಾಮಯ್ಯ ಕುತಂತ್ರ, ಷಡ್ಯಂತ್ರ ರಾಜಕೀಯ
ಜೆಡಿಎಸ್ ನವರು ಯಾರೂ ನಮ್ಮ ಸಂಪರ್ಕದಲ್ಲಿ ಇಲ್ಲ ಯಾವುದೇ ಶಾಸಕರು ಬಿಜೆಪಿಗೆ ಬರ್ಬೇಕಾದ್ರೆ ಶಾಸಕಗಿರಿ ಬಿಡ್ಬೇಕು ಮೊದಲಿನಿಂದಲೂ‌ ನಮ್ಮದು ಇದೇ ನಿಲುವ ಸಿದ್ದರಾಮಯ್ಯ ಐದು ವರ್ಷ ಹೇಗೆ ನಡ್ಕೊಂಡಿದಾರೆ ಅನ್ನೋದನ್ನು ಜನತೆ ನೋಡಿದ್ದಾರೆ
ಜಾತಿ, ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದಾರೆ ,ಸಿದ್ದರಾಮಯ್ಯ ಕುತಂತ್ರ, ಷಡ್ಯಂತ್ರ ರಾಜ್ಯದ ಜನತೆಗೆ ಅರ್ಥವಾಗಿದೆ ಎಂದರು


ಡಿ ಕೆ ಶಿವಕುಮಾರ್ ಬಿಡುಗಡೆ ಯಿಂದ ಉಪ ಚುನಾವಣೆ ಮೇಲೆ ಪ್ರಭಾವ ಇಲ್ಲ
ಡಿಕೆ ಶಿವಕುಮಾರ್ ಇದ್ದಾಗಲೇ ವಿಧಾನಸಭಾ ಚುನಾವಣೆ ಆಗಿದೆ, ಡಿಕೆಶಿ ಮಂತ್ರಿಯಾಗಿದ್ದರೂ ವಿಧಾಸಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ ,ಡಿಕೆಶಿ ಪ್ರಭಾವ ಇದ್ರೂ 104 ಸ್ಥಾನ ಗೆದ್ದಿದ್ದೆವು ,ಕನಕಪುರದಲ್ಲಿ ಡಿಕೆಶಿ ಪ್ರಭಾವ ಇರಬಹುದು ಹಾಗಾಗಿ ಕನಕಪುರ ಗೆಲ್ಲೋದು ನಮಗೆ ಇವತ್ತಿಗೂ ಕಷ್ಟ ಎಂಬುದನ್ನು ಒಪ್ಪುತ್ತೇವೆ ,ಆದರೆ ಅದನ್ನು ಹೊರತು ಪಡಿಸಿ ರಾಜ್ಯದಲ್ಲಿ ಎಲ್ಲೂ ಡಿಕೆಶಿ ಪ್ರಭಾವ ಇಲ್ಲ ,ರಾಜ್ಯದ ಜನಕ್ಕೆ ಡಿಕೆಶಿ ಏನು ಅನ್ನೋದು ಅರ್ಥವಾಗಿದೆ ಎಂಬುದಾಗಿ ತಿಳಿಸಿದರು.

1 thought on “ಮಾನಸಿಕ ಸ್ಥಿಮಿತ ಕಳೆದುಕೊಂಡ ಸಿದ್ದರಾಮಯ್ಯ: ಶೋಭಾ

  1. ಇವರ ದೊಂಡೆಗೆ ಕೋಲು ಹಾಕಿದ್ದು ಯಾರು ಮಾರಾಯ್ರೇ? ಕೋಪ ಬರುವಂಥಾದ್ದು ಏನಿದೆ? ಕುಮಾರಸ್ವಾಮಿಯೇ ಹೇಳಿಯಾಗಿದೆ, ಅನಿವಾರ್ಯ ಆದರೆ, ತಾನು ಬಿಜೆಪಿ ಸೇರಲೂ ಸಿದ್ಧ ಎಂದು. ಈಕೆಗೇ ಏನೂ ಗೊತ್ತಿಲ್ಲ ಅಷ್ಟೇ.

Leave a Reply

Your email address will not be published. Required fields are marked *

error: Content is protected !!