ಬಸ್‌ಗಳ ಮೇಲೆ ಕಲ್ಲು ತೂರಾಟ, ಆರೋಪಿಗಳ ಪತ್ತೆಗೆ ಕ್ರಮ-ಎಸ್ಪಿ

ಬಂಟ್ವಾಳ : ಕಳೆದ ಒಂದೆರಡು ದಿನಗಳಿಂದೀಚಿಗೆ ಬಂಟ್ವಾಳ ತಾಲೂಕಿನಲ್ಲಿ ಒಂಬತ್ತು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಸರಕಾರಿ ಹಾಗೂ ಖಾಸಗಿ ಬಸ್ಸುಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ಮಾಡಿದ್ದು ಬಸ್ ಚಾಲಕರೂ ಸೇರಿದಂತೆ ಕೆಲ ಪ್ರಯಾಣಿಕರಿಗೂ ಗಾಯಗಳಾಗಿವೆ.

ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟುವಿನಲ್ಲಿ ಸೋಮವಾರ ರಾತ್ರಿ ಸರಕಾರಿ ಬಸ್ಸಿಗೆ ಕಲ್ಲುತೂರಾಟ ನಡೆಸಿದರೆ,ಮಂಗಳವಾರ ಬೆಳಿಗ್ಗೆ ಮೇಲ್ಕಾರ್ ಮತ್ತು ಕುದ್ರೆಬೆಟ್ಟಿನಲ್ಲಿ ಖಾಸಗಿ ಬಸ್ಸುಗಳ ಮೇಲೆ ಹಾಗೂ ಶೇಡಿಗುರಿಯಲ್ಲಿ ಮತ್ತೊಂದು ಸರಕಾರಿ ಬಸ್ಸಿನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಎಲ್ಲಾ ಘಟನೆಗಳು ನಿನ್ನೆ ಬೆಳಿಗ್ಗೆ 7 ರಿಂದ 9 ರ ಒಳಗೆ ನಡೆದಿದ್ದು ಬಸ್ ಚಾಲಕರೂ ಸೇರಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಈ ಬಗ್ಗೆ ನಾಗರಿಕರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಈಗಾಗಲೇ ಜಿಲ್ಲಾದ್ಯಾಂತ ಬಿಗಿ ಪೋಲಿಸ್ ಬಂದೋಬಸ್ತನ್ನು ಮಾಡಿದ್ದು ಸಾರ್ವಜನಿಕರು ಹೆದರುವ ಅಗತ್ಯವಿಲ್ಲ, ಶೀಘ್ರದಲ್ಲೇ ಇಂತಹ ಸಮಾಜವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!