ಸೋಣದ ನೇಮ


ಬಂಟ್ವಾಳ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ಪಂಜಿಕಲ್ಲು ಭಾಲೇಶ್ವರ ಬ್ರಹ್ಮಬೈದರ್ಕಳ ಗರಡಿಯಲ್ಲಿ ಕೊಡಮಣಿತ್ತಾಯ ದೈವಕ್ಕೆ ವಾರ್ಷಿಕ ‘ಸೋಣ ನೇಮ’ ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಂಜಿಕಲ್ಲು ಗ್ರಾಮ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಭಕ್ತರು ಆಗಮಿಸಿ ನೇಮೋತ್ಸವ ವೀಕ್ಷಿಸಿದ ಬಳಿಕ ಪ್ರಸಾದ ಸ್ವೀಕರಿಸಿ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ದೈವದ ದರ್ಶನ ಜೊತೆಗೆ ಪಲ್ಲಕಿ ಮತ್ತು ಹುಲಿ ಸವಾರಿ ಸಂಪ್ರದಾಯ ನಡೆಯಿತು…


ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ಕಾಂಗ್ರೆಸ್ ಮುಖಂಡ ಬೇಬಿ ಕುಂದರ್ ಮತ್ತಿತರ ಗಣ್ಯರು ಭೇಟಿ ನೀಡಿ ನೇಮೋತ್ಸವದಲ್ಲಿ ಪಾಲ್ಗೊಂಡರು.
ಕ್ಷೇತ್ರದ ಆಡಳಿತ ಮೊಕ್ತೇಸರೆ ಡಾ.ಚಂದನಾದೇವಿ, ಪುರೋಹಿತ ಶ್ರೀಪತಿ ಭಟ್ ಪುಂಚೋಡಿ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಪ್ರಕಾಶ ಕುಮಾರ್ ಜೈನ್, ಅಧ್ಯಕ್ಷ ಕೆ.ಎನ್.ಶೇಖರ್, ಪ್ರಮುಖರಾದ ಕೃಷ್ಣರಾಜ ಜೈನ್, ಜಯ ಕುಂದರ್, ರವಿ ಪೂಜಾರಿ ಪಾರೊಟ್ಟು, ಗಣೇಶ ಪ್ರಭು ಭಾವಂತಬೆಟ್ಟು, ಕೇಶವ ಪೂಜಾರಿ, ಆನಂದ ಬುರಾಲು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!