ಸಿದ್ಧಾಪುರ: ಜೋಡಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ ಸ್ಥಳೀಯರು

ಉಡುಪಿ: ಶಂಕರನಾರಾಯಣ ಠಾಣಾ ವ್ಯಾಪ್ತಿಯ ಸಿದ್ಧಾಪುರ ಎಂಬಲ್ಲಿ ಅನ್ಯಕೊಮೀನ ಯುವಕನೋರ್ವ ಬೆಂಗಳೂರಿನ ಯುವತಿಯನ್ನು ಅಕ್ರಮವಾಗಿ ಮನೆಯಲ್ಲಿರಿಸಿದ್ದು ಈ ಬಗ್ಗೆ ಸ್ಥಳೀಯರು ಸಂಶಯಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಯುವಕನು ತನ್ನ ಹೆಸರನ್ನು ರೋಶನ್ ಯಾನೆ ಪ್ರದೀಪ್ ಎಂದು ಹೇಳಿ ಕೊಂಡು ಯುವತಿಯನ್ನು ಸಿದ್ಧಾಪುರದ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ.

ಯುವಕ ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ದುಡಿಯುತ್ತಿದ್ದು ತಾನು ಹಿಂದು ಎಂದು ನಂಬಿಸಿ ಯುವತಿಯನ್ನು ಮನೆಯಲ್ಲಿ ಇರಿಸಿದ್ದ.ಯುವಕ ಚಲನ ವಲನ ಕಂಡು ಸಂಶಯಗೊಂಡ ಸ್ಥಳೀಯರು ಶಂಕರನಾರಾಯಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗೂ ಯುವತಿಯ ಪೋಷಕರನ್ನು ಬೆಂಗಳೂರಿನಿಂದ ಕರೆಸಿಕೊಂಡು ಮುಂದಿನ ಕ್ರಮತೆಗೆದುಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!