ಸಾಲಿಗ್ರಾಮ : ತೀರ್ಥ ಕೆರೆಗೆ  ಬಿದ್ದು ಬಾಡಿ ಬಿಲ್ಡರ್ ಸಾವು

ಉಡುಪಿ :ಈಜು ಬಾರದ ಬಾಡಿ ಬಿಲ್ಡರ್ ಓರ್ವರು ದೇವಸ್ಥಾನ ತೀರ್ಥ ಕೆರೆಯಲ್ಲಿ ಸ್ನಾನ ಮಾಡುವಾಗ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಸಾಲಿಗ್ರಾಮದ ಕಾರ್ಕಡ ನಿವಾಸಿ ವಿನೋದ್( 28) ಮೃತಪಟ್ಟವರು. ಬೆಳಿಗ್ಗೆ ಮನೆಯಿಂದ ತೆರಳಿದ್ದ ವಿನೋದ್,ಮಧ್ಯಾಹ್ನದ ಸುಮಾರಿಗೆ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನ ತೀರ್ಥಕೆರೆಯ ದಂಡೆಯ ಮೇಲೆ ಬಟ್ಟೆ ಪತ್ತೆಯಾಗಿತ್ತು.
ಬಳಿಕ ಅಗ್ನಿಶಾಮಕದಳದವರು ಕೆರೆ ಶೋಧ ನಡೆಸಿದಾಗ ವಿನೋದ್‌ ಮೃತ ದೇಹ ಪತ್ತೆಯಾಗಿದೆ. ಬಾಡಿ ಬಿಲ್ಡರ್ ಆಗಿದ್ದ ವಿನೋದ್ ಹಲವಾರು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈಜು ಬಾರದ ಹಿನ್ನಲೆಯಲ್ಲಿ ಕೆರೆಯಲ್ಲಿ‌ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!