ಮೋದಿ ಮತ್ತು ಸುಳ್ಳುಗಳಿಂದ ಗೆದ್ದ ರಘುಪತಿ ಭಟ್,ಕ್ಷೇತ್ರದ ಚಿಂತೆ ಮಾಡಿ: ಪ್ರಮೋದ್

  ಉಡುಪಿ : ಬಿಜೆಪಿ ಗೇಟ್ ತೆರೆದಿದೆ ಎಂದು  ಶಾಸಕ ರಘುಪತಿ ಭಟ್ ಹೇಳಿಕೆಗೆ  ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ರಘುಪತಿ   ಭಟ್ ಅನೇಕ ಸುಳ್ಳುಗಳನ್ನು ಹೇಳಿ ‍ ಮೋದಿ ಮತ್ತು ಹಿಂದುತ್ವದ ಹೆಸರಿನಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಚುನಾವಣೆಯಲ್ಲಿ ಅವರು ಕೊಟ್ಟ ಯಾವುದೇ ಆಶ್ವಾಸನೆ ಈವರೆಗೆ ಈಡೇರಿಸಿಲ್ಲ, ಮರಳುಗಾರಿಕೆಯನ್ನು  ನಾನು ಗೆದ್ದ ಒಂದು ತಿಂಗಳಲ್ಲಿ ಮಾಡಿಕೊಡುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದ ಭಟ್  ಇದರಲ್ಲಿ ಸಂಪೂರ್ಣ ವಿಫಲತೆಯಾಗಿದ್ದಾರೆ. ನನ್ನ  ಅವಧಿಯ ಮಂಜೂರುಗೊಂಡ  ಕಾಮಗಾರಿ ಮುಂದುವರಿಸುತ್ತಾ ಈಗ ಅದನ್ನೇ ಉದ್ಘಾಟನೆ ಮಾಡುತಿದ್ದಾರೆ.

ನನ್ನ ಅವಧಿಯ  ಕೆಲವೊಂದು ಕಾಮಗಾರಿಗಳಿಗೆ ಅವರು ತಡೆ ಒಡ್ದಿದು , ಶಾಸಕರಾಗಿ ಈವರೆಗೆ ಸಂಪೂರ್ಣ ವಿಫಲವಾಗಿದ್ದಾರೆ. ಮುಂದಿನ ದಿನಗಳಲ್ಲಿ ಆದರೂ ಅವರ ಕ್ಷೇತ್ರದ ಜನತೆಗೆ ಕೊಟ್ಟ ಮಾತನ್ನು ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಆಗಬೇಕಾದ ಕಾಮಗಾರಿಗಳ  ಮಾಡಬೇಕು. ನನ್ನ ರಾಜಕೀಯ ನಡೆ ಮತ್ತು ರಾಜಕೀಯ ನಿರ್ಧಾರದ ಬಗ್ಗೆ  ಭಟ್ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ . ರಘುಪತಿ   ಭಟ್ ಕ್ಷೇತ್ರದ ಅಭಿವೃದ್ಧಿ  ಮತ್ತು ಜನತೆಯ ಬಗ್ಗೆ ತಲೆ ಕೆಡಿಸುವ ಅಗತ್ಯವಿದೆ ಎಂದು ಪ್ರಮೋದ್ ಮಧ್ವರಾಜ್ ಶಾಸಕ ಭಟ್ ಗೆ ಉಚಿತ ಸಲಹೆ ನೀಡುತಿದ್ದೇನೆ ಎನ್ನುವ ಆಡಿಯೋ ವೈರಲ್   ಆಗುತ್ತಿದೆ.

ReplyForward

Leave a Reply

Your email address will not be published. Required fields are marked *

error: Content is protected !!