ಯುವ ದಸರಾ ಉದ್ಘಾಟನೆಗೆ ಚಿನ್ನದ ಹುಡುಗಿ ಪಿ.ವಿ.ಸಿಂದು

ಬೆಂಗಳೂರು: ಈ ಬಾರಿ ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್ ಪ್ರಶಸ್ತಿ ಪಡೆದ ಪಿ.ವಿ ಸಿಂಧು ಅವರನ್ನು ಯುವ ದಸರಾ ಕಾರ್ಯಕ್ರಮ ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಅವರು ಆಹ್ವಾನ ಕೊಟ್ಟಿದ್ದಾರೆ.

ಅಕ್ಟೊಬರ್ 1 ರಂದು ಯುವ ದಸರಾ ಉದ್ಘಾಟನೆ ನಡೆಯಲಿದೆ ಈ ಒಂದು ಸಂದರ್ಭದಲ್ಲಿ ತಾವು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಭಾರತದ ಕೀರ್ತಿ ಪತಾಕೆ ಪ್ರಪಂಚದಾದ್ಯಂತ ಹಾರಿಸಿದ್ದೀರಿ, ನೀವು ಲಕ್ಷಾಂತರ ಯುವ ಕ್ರೀಡಾ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದ್ದೀರಿ ಹೀಗಾಗಿ ನೀವು ನಮ್ಮ ಮೈಸೂರು ದಸರಾ ಉದ್ಘಾಟನೆ ಮಾಡಬೇಕು ಎಂದು ಪತ್ರದ ಮೂಲಕ ಕೋರಿಕೊಂಡಿದ್ದಾರೆ.

ಚಿನ್ನದ ಹುಡುಗಿ ಪಿ.ವಿ. ಸಿಂಧು ಮೈಸೂರು ದಸರಾ ಮಹೋತ್ಸವ 2019ರ ದಸರಾ ಕ್ರೀಡಾಕೂಟ ಹಾಗೂ ಯುವದಸರಾ ಉದ್ಘಾಟನೆ ಮಾಡಲಿದ್ದಾರೆ. ಅಕ್ಟೋಬರ್ 1ರಂದು ಸಾಂಸ್ಕೃತಿಕ ನಗರಕ್ಕೆ ಸಿಎಂ ಬಿ. ಎಸ್. ಯಡಿಯೂರಪ್ಪ ಜೊತೆ ಪಿ.ವಿ. ಸಿಂಧು ಆಗಮಿಸಿ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!