ರೌಡಿಶೀಟರ್ ಭವಿತ್ರಾಜ್ ಮೇಲೆ ಪೊಲೀಸ್ ಪೈರಿಂಗ್

ಮಂಗಳೂರು: ರೌಡಿಶೀಟರ್ ಭವಿತ್ ರಾಜ್ ಮೇಲೆ ಕಂಕನಾಡಿ ಪೊಲೀಸರು ಫೈರಿಂಗ್ ನಡೆಸಿರುವ ಘಟನೆ ನಡೆದಿದೆ.

ರೌಡಿಶೀಟರ್ ಭವಿತ್‌ರಾಜ್‌ನನ್ನು ಪ್ರಕರಣವೊಂದರ ಸಂಬಂಧ ಕಂಕನಾಡಿ ಪೊಲೀಸರು ಅರೆಸ್ಟ್ ಮಾಡಲು ಹೋದಾಗ ಮಂಗಳೂರಿನ ಅಡ್ಯಾರ್ ಬಳಿ ಘಟನೆ ನಡೆದಿದೆ.

ರೌಡಿಶೀಟರ್ ಭವಿತ್‌ರಾಜ್ ಗೋರಕ್ಷಣೆ ನೆಪದಲ್ಲಿ ಲಾರಿ ಚಾಲಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ.

ಈ ಘಟನೆಗೆ ಸಂಬಂಧಿಸಿದ್ದಂತೆ ಭವಿತ್‌ರಾಜ್ ಮೇಲೆ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸಂಬಂಧ ಅರೆಸ್ಟ್ ಮಾಡಲು ಹೋದಾಗ ರೌಡಿಶೀಟರ್ ಭವಿತ್‌ರಾಜ್ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ.

ಈ ಹಿನ್ನಲೆಯಲ್ಲಿ ರೌಡಿ ಶೀಟರ್ ಭವಿತ್‌ರಾಜ್ ಮೇಲೆ ಕಂಕನಾಡಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ.

ಶೂಟೌಟ್‌ನಿಂದ ಗಾಯಗೊಂಡಿದ್ದ ಭವಿತ್‌ರಾಜ್‌ನ್ನು ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!