ಪೆರಂಪಳ್ಳಿ ರಿಕ್ಷಾ ಚಾಲಕರ ಸಂಘ: ಅಧ್ಯಕ್ಷ ಅನಿಲ್ ಆಯ್ಕೆ


ಉಡುಪಿ : ಪೆರಂಪಳ್ಳಿ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಮಹಾಸಭೆ ಇತ್ತೀಚೆಗೆ ನವಚೈತನ್ಯ ಯುವಕ ಮಂಡಲ ಶಿ೦ಬ್ರ ಪೆರಂಪಳ್ಳಿ  ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಜಯಾನಂದ ಅಮೀನ್ ರವರ ಅಧ್ಯಕ್ಷತೆಯಲ್ಲಿ  ನಡೆಯಿತು.


2019-20 ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಅನಿಲ್ ಗೋನ್ಸಾಲ್ವಿಸ್, ಉಪಾಧ್ಯಕ್ಷರಾಗಿ ಸಹದೇವ, ಕಾರ್ಯದರ್ಶಿ ಅರುಣ ಸರ್ವಾನುಮತದಿಂದ ಆಯ್ಕೆ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ಜಯಾನಂದ ಅಮೀನ್ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ, ಸಂಘದ ಸದಸ್ಯರು ನಿಯಮಗಳನ್ನು ಪಾಲಿಸಿಕೊಂಡು ಜವಾಬ್ದಾರಿಯಿಂದ ವರ್ತಿಸಿದರೆ ನಮ್ಮ ಸಂಘ ಬಲಿಷ್ಠವಾಗುತ್ತದೆ ಎಂದರು.

1 thought on “ಪೆರಂಪಳ್ಳಿ ರಿಕ್ಷಾ ಚಾಲಕರ ಸಂಘ: ಅಧ್ಯಕ್ಷ ಅನಿಲ್ ಆಯ್ಕೆ

Leave a Reply

Your email address will not be published. Required fields are marked *

error: Content is protected !!