ತಮ್ಮ ಸ್ವಂತ ಖರ್ಚಿನಲ್ಲಿ ದಿನಸಿ ಸಾಮಾನು ಪೂರೈಕೆ ಮಾಡಿದ ಪೆರಂಪಳ್ಳಿ ಆಟೋ ಚಾಲಕರು

ಉಡುಪಿ (ಉಡುಪಿ ಟೈಮ್ಸ್ ವರದಿ )-ಪೆರಂಪಳ್ಳಿ ಆಟೋ ಚಾಲಕ ಹಾಗು ಮಾಲಕರ ಸಂಘ ದ ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ಪೆರಂಪಳ್ಳಿಯ ಸುಮಾರು 40 ಕ್ಕೂ ಅಧಿಕ ಬಡ ಕುಟುಂಬಗಳನ್ನು ಗುರುತಿಸಿ, “ನಾವೂ ನಿಮ್ಮೊಂದಿಗೆ ಇದ್ದೇವೆ” ಎಂಬ ಸಂದೇಶದೊಂದಿಗೆ ಮನೆ ಮನೆಗೆ ತೆರಳಿ ಮಾಸ್ಕ್ ನೀಡಿ, ಕೊರೊನದ ಬಗ್ಗೆ ಜನಜಾಗೃತಿಯನ್ನು ಮೂಡಿಸುವುದರ ಮೂಲಕ ದಿನ ನಿತ್ಯ ಬಳಕೆಯಾಗುವ ಆಹಾರ ಸಾಮಗ್ರಿಗಳನ್ನು ಅರ್ಹರಿಗೆ ವಿತರಿಸಿದರು.


ತಾವು ಕಷ್ಟ ಪಟ್ಟು ದುಡಿದಿರುವ ಹಣದಲ್ಲಿ ಆಟೋ ಚಾಲಕರು ಬಡವರಿಗಾಗಿ ಮಾಡಿರುವ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.
ಈ ಕಾರ್ಯಕ್ರಮದಲ್ಲಿ ಪೆರಂಪಳ್ಳಿಯ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!