ಬಸ್ ನಲ್ಲಿಯೇ ಹೃದಯಾಘಾತಕ್ಕೊಳಗಾಗಿ ಪ್ರಯಾಣಿಕನ ಸಾವು

ಬಂಟ್ವಾಳ: ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರೊಬ್ಬರು ಕುಳಿತಲ್ಲೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ  ಮಂಗಳವಾರ ರಾತ್ರಿ ನಡೆದಿದೆ. ಬೆಳಗಾಂ ನ ಆಥೆಣಿ ನಿವಾಸಿ ಮಂಜುನಾಥ ಭಟ್ (75) ಮೃತರೆಂದು ಗುರುತಿಸಲಾಗಿದೆ.
ಪುತ್ತೂರಿನ ವರೆಗೆ ಮೊಬೈಲ್ ನಲ್ಲಿಮಾತನಾಡುತ್ತಿದ್ದರೆನ್ನಲಾಗಿದೆ .ಬಳಿಕ  ದಾರಿ ಮಧ್ಯೆ ಇವರು ಮಥಪಟ್ಟರಬೇಕೆಂದು ಶಂಕಿಸಲಾಗಿದೆ. ಬಸ್ ನ ನಿರ್ವಾಹಕನ ಸೂಚನೆಯಂತೆ ಬಸ್ ನ್ನು ಬಿ.ಸಿ.ರೋಡಿನಲ್ಲಿ ನಿಲ್ಲಿಸಿ ಬಂಟ್ವಾಳ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಜಾಗಮಿಸಿದ ಪೊಲೀಸರು ಮೃತರ ಬ್ಯಾಗ್ ನಲ್ಲಿದ್ದ ಆಧಾರ್ ಕಾಡ್೯ ನ ಆಧಾರದಲ್ಲಿ  ಗುರುತು ಪತ್ತೆ ಹಚ್ಚಿದ್ದಾರೆ.ಮೃತದೇಹವನ್ನು ತುಂಬೆ ಶವಗಾರದಲ್ಲಿರಿಸಲಾಗಿದೆ.  .

Leave a Reply

Your email address will not be published. Required fields are marked *

error: Content is protected !!