70 ದನಗಳ್ಳರಿಗೆ ಪರೇಡ್; ದುಷ್ಕೃತ್ಯದಲ್ಲಿ ತೊಡಗದಂತೆ ಎಎಸ್ಪಿ ಖಡಕ್ ಎಚ್ಚರಿಕೆ

ಕಾರ್ಕಳ : ಕಾರ್ಕಳ ಉಪವಿಭಾಗ ವ್ಯಾಪ್ತಿಗೆ ಒಳಪಡುವ 7 ಠಾಣೆಗಳಲ್ಲಿ ದನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಕಾರ್ಕಳ ಎಎಸ್ಪಿ ಕಚೇರಿಯಲ್ಲಿ ಕರೆತಂದು ಪರೇಡ್ ನಡೆಸಲಾಯಿತು.

ಉಡುಪಿ ಜಿಲ್ಲಾ ಎಡಿಶನಲ್ ಎಸ್ಪಿ ಕುಮಾರಚಂದ್ರ ಸುಮಾರು 70 ಆರೋಪಿಗಳನ್ನು ಉದ್ದೇಶಿಸಿ ದನಕಳ್ಳತನದಂತಹ ಸಾಮಾಜಿಕ ಶಾಂತಿ ಕದಡುವ ಪ್ರಕರಣಗಳಲ್ಲಿ ಭಾಗಿಯಾಗಿದ್ದೀರಿ ಇಂತಹ ದುಷ್ಕೃತ್ಯಗಳನ್ನು ಪೊಲೀಸ್ ಇಲಾಖೆ ಸಹಿಸುವುದಿಲ್ಲ. ಇನ್ನು ಮುಂದೆ ಇದೇ ಅಪರಾಧಗಳು ಪುರಾವರ್ತಿಸಿದಲ್ಲಿ ಗೋಕಳ್ಳತನ ಪ್ರಕರಣದಲ್ಲಿ ಭಾಗಿಯಾದವರ ವಿರುದ್ದ ಗೂಂಡಾ ಕಾಯ್ದೆ ಹಾಗೂ ಗಡಿಪಾರಿನಂತಹ ಕಠಿಣ ಪ್ರಕರಣಗಳನ್ನು ದಾಖಲಿಸುವುದಾಗಿ ಆರೋಪಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಎಎಸ್ಪಿ ಕೃಷ್ಣಕಾಂತ್, ವೃತ್ತನಿರೀಕ್ಷಕ ಹಾಲಮೂರ್ತಿ ಹಾಗೂ ವಿವಿಧ ಠಾಣೆಯ ಎಸೈಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!