ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ “ಸುಧಾರಿತ ಯೂರೋಡೈನಾಮಿಕ್ ಪ್ರಯೋಗಾಲಯ”ದ ಉದ್ಘಾಟನೆ

 

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸುಧಾರಿತ ಯೂರೋಡೈನಾಮಿಕ್ ಪ್ರಯೋಗಾಲಯವನ್ನು ಮಾಜಿ ಸಚಿವ  ,ಶಾಸಕರಾದ  ಹೆಚ್.ಕೆ ಪಾಟೀಲ ಉದ್ಘಾಟಿಸಿದರು .

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಹೆಚ್ ಕೆ ಪಾಟೀಲ್ ಅವರು “ಭಾರತವು ಮಣಿಪಾಲದ ಬಗ್ಗೆ ಹೆಮ್ಮೆಪಡುತ್ತದೆ, ಏಕೆಂದರೆ ವಿಶ್ವದಾದ್ಯಂತ 500ರೊಳಗೆ ಸ್ಥಾನ ಪಡೆದಿರುವ ಏಕೈಕ ವಿಶ್ವವಿದ್ಯಾಲಯ ಮಾಹೆ ಮಣಿಪಾಲ ಆಗಿದೆ. ಉತ್ತರ ಕರ್ನಾಟಕದ ಜನರು ಶ್ರೀಯುತ ಪೈ ಅವರನ್ನು ರೂಪೈ ಎಂದು ಕರೆಯುತ್ತಾರೆ. ಏಕೆಂದರೆ ಅವರು ಶಿಕ್ಷಣ, ಆರೋಗ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಮಣಿಪಾಲ ಸಮೂಹವನ್ನು ಉತ್ತಮ ಹಾಗೂ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿಹೊಂದಿದೆ, ಏಕೆಂದರೆ ಇದು ಉತ್ತಮ ದೂರದೃಷ್ಟಿತ್ವದ ನಾಯಕ, ಸಮರ್ಥ ಆಡಳಿತಗಾರರು ಮತ್ತು ಶ್ರಮಜೀವಿಗಳನ್ನು ಕೆಲಸಗಾರರನ್ನಾಗಿ ಪಡೆದುಕೊಂಡಿದೆ. ಆರೋಗ್ಯ ಮತ್ತು ಗುಣಮಟ್ಟದ ಚಿಕಿತ್ಸೆಯಲ್ಲಿ ಮಣಿಪಾಲ ತನ್ನ ಶ್ರೇಷ್ಠತೆಗೆ ಹೆಸರುವಾಸಿಯಾಗಿದೆ” ಎಂದರು.

ಮೂತ್ರಕೋಶ, ಮೂತ್ರಾಂಗವ್ಯೂಹದ ಸ್ಫಿಂಕ್ಟರ್ (ಉಂಗುರದಂಥ ಮುಚ್ಚಳ) ಮತ್ತು ಪೆಲ್ವಿಕ್ ಫ್ಲೋ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ಯೂರೋಡೈನಾಮಿಕ್ ಅಧ್ಯಯನಗಳು ಮುಖ್ಯ. ಹಾಗಾಗಿ, ಡಿಟ್ರಸರ್ (ಮೂತ್ರಾಶಯದ ಸ್ನಾಯು) ಕಾರ್ಯಾಚರಣೆ, ಮೂತ್ರಾಂಗವ್ಯೂಹದ ಸ್ಫಿಂಕ್ಟರ್ ಮತ್ತು ಪೆಲ್ವಿಕ್ ಫ್ಲೋ ಚಟುವಟಿಕೆಗಳನ್ನು ವಿಶ್ಲೇಷಿಸಲು ಇದನ್ನು ಉಪಯೋಗಿಸಲಾಗುತ್ತದೆ. ಮೂತ್ರ ಸೋರಿಕೆ, ಅವಸರದ ಮೂತ್ರ ವಿಸರ್ಜನೆಯ ರೋಗಿಗಳಲ್ಲಿ ಈ ತೊಂದರೆಗಳಿಗೆ ಕಾರಣವೇನು ಎಂಬುದನ್ನು ಕಂಡುಕೊಳ್ಳಲು ವಿಶೇಷ ಉಪಕರಣ ಬಳಸಿ ಮಾಡಿದ ಅಧ್ಯಯನಗಳು ಬಹಳಷ್ಟು ಸಹಕಾರಿಯಾಗಿವೆ.

ಯೂರೋಡೈನಾಮಿಕ್ ಅಧ್ಯಯನವು ಮೂತ್ರ ಬರಿದುಮಾಡುವ ತೊಂದರೆ ಇರುವ ಪಾರ್ಕಿನ್ಸನ್ಸ್ ರೋಗಿಗಳಿಗೆ, ಮೂತ್ರನಾಳದ ತೊಂದರೆಯಿರುವ ಪುರುಷರಲ್ಲಿ ಬೆನ್ನುಹುರಿಯಲ್ಲಿ ಹಾನಿಯಾಗುವುದನ್ನು ತಡೆಯಲು, ಮೂತ್ರ ಹಿಡಿದಿಟ್ಟುಕೊಳ್ಳುವ ಸಮಸ್ಯೆ ಇರುವ ಸ್ತ್ರೀಯರಿಗೆ, ಮಕ್ಕಳಲ್ಲಿ ಮೂತ್ರದ ತೆರಪು ಹಿಂಭಾಗದಲ್ಲಿ ಇರುವ ಸಮಸ್ಯೆ (ಪೋಸ್ಟೀರಿಯರ್ ಯುರೆಥ್ರಲ್ ವಾಲ್ವ್) ಮತ್ತು ಸೆಕೆಂಡರಿ ವಿಯುಅರ್ ಇರುವವರಲ್ಲಿ ಈ ಸಮಸ್ಯೆಗಳ ನಿರ್ವಹಣೆಗೆ ಮಾರ್ಗದರ್ಶನ ನೀಡಲು ಮತ್ತು ಅನುಸರಣೆಗೆ ಯೂರೋಡೈನಾಮಿಕ್ ಅಧ್ಯಯನ ಸಹಾಯ ಮಾಡುತ್ತದೆ. ಮೂತ್ರ ಬರಿದು ಮಾಡುವಿಕೆಯ ಹಲವು ದರ್ಜೆಯ ತೊಂದರೆಗಳಿರುವ ರೋಗಿಗಳಿಗೆ ಚಿಕಿತ್ಸಾ ತಂತ್ರಗಳನ್ನು ಯೋಜಿಸಲು ಯೂರೋಡೈನಾಮಿಕ್ಸ್ ಅಧ್ಯಯನ ನೆರವಾಗುತ್ತದೆ.

 ಮಣಿಪಾಲ ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಹೆಚ್. ಎಸ್. ಬಲ್ಲಾಳ್‍ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಹೆ ಮಣಿಪಾಲದ ಉಪಕುಲಪತಿ ಡಾ. ವಿನೋದ ಭಟ್ ಮತ್ತು ಸಹ ಉಪಕುಲಪತಿ ಡಾ. ಪೂರ್ಣಿಮಾ ಬಾಳಿಗಾರವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಕೆಎಂಸಿ ಮಣಿಪಾಲದ ಡೀನ್ ಡಾ. ಶರತ್ ಕೆ ರಾವ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಕಸ್ತೂರ್ಬಾ ಆಸ್ಪತ್ರೆಯ ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ವಿಭಾಗದ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಅರುಣ ಚಾವ್ಲಾರವರು ಉಪಸ್ಥಿತರಿದ್ದರು.
 ನಾನು ಈ ಹೊಸ ಸೇವೆಗೆ ಎಲ್ಲ ರೀತಿಯ ಶುಭ ಹಾರೈಸುತ್ತೇನೆ ಮತ್ತು ಭವಿಷ್ಯದಲ್ಲಿ ಸಮುದಾಯಕ್ಕೆ ಹೆಚ್ಚಿನ ಸೇವೆ ಸಲ್ಲಿಸಲು ಇಂತಹ ಇನ್ನೂ ಅನೇಕ ಸೌಲಭ್ಯಗಳು ಬರಲಿ ಎಂದು ನಾನು ಬಯಸುತ್ತೇನೆ”ಎಂದೂ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಚ್. ​​ವಿನೋದ್ ಭಟ್ ಅವರು “ಪಾಟೀಲ್ ಕುಟುಂಬದ ಕಾರಣದಿಂದಾಗಿ ಶಿಕ್ಷಣ, ಆರೋಗ್ಯ ಮತ್ತು ಹಣಕಾಸು ರೂಪದಲ್ಲಿ ಗದಗ – ಬೆಟಗೇರಿ ಪ್ರದೇಶದಲ್ಲಿ ಸಾಕಷ್ಟು ಸುಧಾರಣೆಗಳು ಸಂಭವಿಸಿವೆ. ಇಂದು ಆರಂಭವಾದ ಈ ಯುರೋಡೈನಾಮಿಕ್ ಪ್ರಯೋಗಾಲಯ ಸೌಲಭ್ಯವು ಆರೋಗ್ಯ ನಕ್ಷತ್ರಪುಂಜದ ಆಧುನಿಕ ಆಯುಧಗಳಲ್ಲಿ ಒಂದು” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಚ್. ಎಸ್. ಬಲ್ಲಾಳ್ ಅವರು “ಕಸ್ತೂರ್ಬಾ ಆಸ್ಪತ್ರೆಯ ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ವಿಭಾಗ ದೇಶದಲ್ಲಿಯೇ ಶ್ರೇಷ್ಟ ವಿಭಾಗವಾಗಿದೆ. ಕಸ್ತೂರ್ಬಾ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗವು ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಮಣಿಪಾಲ ಸಮೂಹ ಸಂಸ್ಥೆಗೆ ಪ್ರಥಮ ಆದ್ಯತೆ ನೀಡುತ್ತಾರೆ. ಜೀವನಶೈಲಿ ಕಾಯಿಲೆಯಿಂದ ಪ್ರಭಾವಿತವಾದ ಅಂಗಗಳಲ್ಲಿ ಮೂತ್ರಪಿಂಡ (ಕಿಡ್ನಿ) ಕೂಡ ಒಂದು. ಇದಕ್ಕೆ ಸಂಬಂಧಪಟ್ಟ ಕಾಯಿಲೆ ಮತ್ತು ಚಿಕಿತ್ಸಾ ವಿಧಾನವನ್ನು ಯುರೋಡೈನಮಿಕ್ ಪ್ರಯೋಗಾಲಯದ ಸಹಾಯದಿಂದ ಕಂಡುಹಿಡಿಯಬಹುದು. ವಿಶ್ವದಾದ್ಯಂತ ಮಾಹೆ ಮಣಿಪಾಲವನ್ನು ಅಗ್ರ 200 ಶ್ರೇಯಾಂಕಿತ ಸಂಸ್ಥೆಗಳಲ್ಲಿ ಒಂದಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ” ಎಂದರು.
ಮಣಿಪಾಲ ಮಾಹೆಯ ಸಹ ಉಪಕುಲಪತಿ ಡಾ. ಪೂರ್ಣಿಮಾ ಬಿ ಬಾಳಿಗಾರವರು ಯುರೋಡೈನಾಮಿಕ್ಸನ ಪ್ರಮಾಣಿತ ಕಾರ್ಯ ವಿಧಾನ ಸೂಚಿ (ಎಸ್‍ಒಪಿ) ಬಿಡುಗಡೆ ಮಾಡಿದರು. ಕೆಎಂಸಿಯ ಡೀನ್ ಡಾ. ಶರತ್ ಕೆ ರಾವ್‍ರವರು ನೆರೆದವರಿಗೆ ಸ್ವಾಗತ ಬಯಸಿದರು. ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿಯವರು ವಂದನೆಗೈದರು.

Leave a Reply

Your email address will not be published. Required fields are marked *

error: Content is protected !!