ಯುವಕನ ಕತ್ತು ಹಿಸುಕಿ ಕೊಲೆ

ಉಡುಪಿ: ಅರೆನಗ್ನ ಸ್ಥಿತಿಯಲ್ಲಿ ಬ್ರಹ್ಮಾವರದ ವಾರಂಬಳ್ಳಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕ್ರಿಸ್ಟಿನ್ ಡಿಸಿಲ್ವಾ ಅವರ ತೋಟದಲ್ಲಿ ರಮೇಶ ಪೂಜಾರಿಯವರುನಡೆದುಕೊಂಡು ಹೋಗುತ್ತಿದ್ದಾಗ ಮಳೆ ನೀರು ಹರಿಯುವ ತೋಡಿನಲ್ಲಿ ಯುವಕನ ಶವ ಇರುವುದನ್ನು ನೋಡಿ ಡಿಸಿಲ್ವಾರಿಗೆ ಮಾಹಿತಿ ನೀಡಿದ್ದರು.

ಮೃತ ದೇಹದ ಮೇಲೆ ಕಪ್ಪು ಬಣ್ಣದ ಅಂಗಿ ಇದ್ದು, ಯುವಕನ ಗುರುತು ಪತ್ತೆಯಾಗಿಲ್ಲ. ಮೃತ ದೇಹದ ಕುತ್ತಿಗೆಯಲ್ಲಿ ಬಟ್ಟೆ ಸುತ್ತಿಕೊಂಡಿರುವುದನ್ನು ಗಮನಿಸಿದ ಬ್ರಹ್ಮಾವರ ಪೊಲೀಸರು ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ್ದರು. ಬಳಿಕ ಮೃತದೇಹವನ್ನು ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ , ಯುವಕನನ್ನು ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ. ಬ್ರಹ್ಮಾವರ ಪೊಲೀಸರು ಇದೊಂದು ಕೊಲೆ ಪ್ರಕರಣವೆಂದು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *

error: Content is protected !!