ಕಾಪು ಮಾರಿಗುಡಿ ದೇವಿ ಅಪ್ಪಣೆ ಕೊರೋನಾಗೆ ಔಷಧ: ವಾಟ್ಸಾಪ್ ನಲ್ಲಿ ಸುಳ್ಳು ಸುದ್ಧಿ!

ಕಾಪು: (ಉಡುಪಿ ಟೈಮ್ಸ್ ವರದಿ) ಕೊರೋನಾ ಬರದಂತೆ ತಡೆಯಲು ಇಂದು ಸಂಜೆಯೊಳಗೆ ಚಾ ಕಣ್ಣ ಮಾಡಿ ಅದಕ್ಕೆ ಸ್ವಲ್ಪ ಬೆಲ್ಲ ಮತ್ತು ಅರಸಿನ ಹಾಕಿ ಕುಡಿಯಬೇಕು ದೇವಿ ಅಪ್ಪಣೆಯಾಗಿದೆ ಎಂಬ ಸಂದೇಶವೊಂದು ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿದ್ದು, ಇದೊಂದು ಸುಳ್ಳು ಸಂದೇಶ ಇದನ್ನು ಯಾರು ನಂಬಬಾರದಾಗಿ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟ ಪಡಿಸಿದೆ.


ಕಾಪು ಮಾರಿಗುಡಿಯಲ್ಲಿ ಕೊರೋನಾ ಮದ್ದಿನ ವಿಚಾರವಾಗಿ ತಾಯಿಯ ಯಾವುದೇ ಅಪ್ಪಣೆಯಾಗಿಲ್ಲ.ಇದೊಂದು ಸುಳ್ಳು ಸುದ್ದಿ ನಂಬಬೇಡಿ. ಸುಗ್ಗಿ ಮಾರಿಪೂಜೆಯ ದಿನವಾದ ಇಂದು ಮಧ್ಯಾಹ್ನ ದೇವಿಯ ದರ್ಶನ‌ ಸೇವೆ ಇರುವುದಿಲ್ಲ. ದಯಮಾಡಿ ಆ ವಾಟ್ಸಾಪ್ ಮೆಸಜ್ ನಂಬಬೇಡಿ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಜನರು ಈ ರೀತಿಯ ಸುಳ್ಳು ಸುದ್ದಿಗಳನ್ನು ನಂಬದೆ ಮನೆಯಲ್ಲಿಯೇ ಇದ್ದು ತಮ್ಮ ರಕ್ಷಣೆಗಳನ್ನು ಮಾಡಿಕೊಳ್ಳಬೇಕು ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!