ಮಂಗಳೂರು ಮಹಾಮಾರಿ ಡೆಂಗ್ಯೂಗೆ ಇನ್ನೊಂದು ಬಲಿ

ಬೋಳಾರ ನಿವಾಸಿ   ಕಾರ್ತಿಕ್ (25) ಕಳೆದ ಕೆಲವು ದಿನಗಳಿಂದ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾನೆ.

ಕಾರ್ತಿಕ್ ಸಾವಿಗೆ ಡೆಂಗ್ಯೂ ಕಾರಣ ಎಂಬುದು ದೃಢಪಟ್ಟಿಲ್ಲ ಎಂದು ಆರೋಗ್ಯಧಿಕಾರಿ ಡಾ. ರಾಮಕೃಷ್ಣರಾವ್ ತಿಳಿಸಿದ್ದಾರೆ.

ಆದರೆ ಮಂಗಳೂರಿನ  ದಿನೇ ದಿನೇ ಉಲ್ಬಣಗೊಳ್ಳುತ್ತಿರುವ‌ ಈ ಮಹಾಮಾರಿ ರೋಗಕ್ಕೆ ಹಲವಾರು ಜನ ಅಸುನೀಗಿದ್ದಾರೆ .ಜಿಲ್ಲಾಡಳಿತ  ಇದರ  ಬಗ್ಗೆ ಜಾಗೃತಿ ಅಭಿಯಾನ ಮುಂದುವರಿಸಿದ್ದು ಹಲವಾರು  ಸಾರ್ವಜನಿಕ ಕಾರ್ಯಕ್ರಮವನ್ನು ನಡೆಸುತ್ತಿದೆ.

Leave a Reply

Your email address will not be published. Required fields are marked *

error: Content is protected !!