ಮಂಗಳೂರು ವಿಮಾನ ಅವಘಡ : ಚಾಲಕನ ಲೈಸನ್ಸ್ ಅಮಾನತು

ಮಂಗಳೂರು: ಕಳೆದ ಜೂನ್‌ನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರನ್ ವೇ ಯಿಂದ ಜಾರಿ ಚರಂಡಿ ದಾಟಿನಿಂತ ಘಟನೆಗೆ ಕಾರಣನಾದ ಪೈಲಟ್‌ನ ಲೈಸನ್ಸ್‌ನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಲಯ ರದ್ದುಗೊಳಿಸಿದೆ.

ಕಳೆದ ಜೂನ್ 30 ರಂದು 183 ಪ್ರಯಾಣಿಕರನ್ನು ದುಬೈನಿಂದ ಹೊತ್ತು ತಂದ ವಿಮಾನ ಅವಘಡಕ್ಕೆ ಅತೀ ವೇಗ ಹಾಗೂ ಲ್ಯಾಂಡಿಗ್ ವಿಳಂಬವಾಗಿದೆಂದು ತನಿಖೆಯಲ್ಲಿ ತಿಳಿದು ಬಂದಿದೆ. ಚಾಲಕನ ನಿರ್ಲಕ್ಷಕ್ಕೆ ಆತನ ವಿಮಾನ ಚಾಲನ ಪರಾವನಿಗೆ ಒಂದು ವರ್ಷವರೆಗೆ ಅಮಾನತು ಮಾಡಲಾಗಿದೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!