“ಮಗಳೇ “ಕನ್ನಡ ಕಿರುಚಿತ್ರ, ಬಿಡುಗಡೆ

ಉಡುಪಿ – ಋತುಚಕ್ರ ಬಗ್ಗೆ ವಿದ್ಯಾರ್ಥಿಗಳಿಗೆ ಇರುವ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಬೇಕು ಇದೊಂದು ದೇವರು ಸೃಷ್ಟಿಸಿದ ನಿಯಮ, ಅದರ ಬಗ್ಗೆ ಇರುವ ಮುಜುಗರ ದೂರಮಾಡಿ ಎಂದು ಉಡುಪಿ ಪ್ರೆಸ್ ಕ್ಲಬ್ “ಮಗಳೇ “ಕನ್ನಡ ಕಿರುಚಿತ್ರ ಬಿಡುಗಡೆಗೊಳಿಸಿ ರಂಗನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿದರು . ಇಂದಿನ ಯುವ ಪೀಳಿಗೆಗೆ ಈ ಚಿತ್ರದಿಂದ ಉತ್ತಮ ಸಂದೇಶ ನೀಡುವಂತಾಗಲಿ ಎಂದರು.

ಎಸ್ .ಆರ್. ಪ್ರೊಡಕ್ಷನ್ ಅವರ ನಿರ್ಮಾಣದ ಮಗಳೇ ಕಿರು ಚಿತ್ರ ಸುದರ್ಶನ್ ಸುವರ್ಣ ಹಿರಿಯೂರು ಮತ್ತು ರೋಹಿತ್ ಮಲ್ಪೆ ನಿರ್ಮಾಣದ ಈ ಚಿತ್ರದಲ್ಲಿ ಸುಜಾತಾ ಶೆಟ್ಟಿ, ಪೇರಿಂಜೆ ಪಲ್ಲವಿ ಕೊಡಗು, ದರ್ಶನ್ ಸುವರ್ಣ ಶುಭಲಕ್ಷ್ಮಿ ,ಕಡೆಕಾರ್ ಗೀತಾ ಕಾಪು ಭಾರತಿ ಮುಖ್ಯ ಪಾತ್ರದಲ್ಲಿ ಇದ್ದಾರೆ , ಕಮಲ್ ಲಕ್ಷ್ಮಿನಗರ ಮತ್ತು ಸತೀಶ್ ಅವರ ಚಿತ್ರೀಕರಣ ಮಾಡಿರುತ್ತಾರೆ. ಕನ್ನಡ ತುಳು ಸಿನಿಮಾಗಳ ಸಹ ನಿರ್ದೇಶಕ ಗೀತ ರಚನೆಕಾರ ಸುರೇಶ್ ಎಸ್ಸಾರ್ ಅವರ ಈ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ.ಬಿಡುಗಡೆ ಸಂದರ್ಭ ನಿರ್ದೇಶಕ ಸುರೇಶ್ ಎಸ್ಆರ್ ನಿರ್ಮಾಪಕ ಸುದರ್ಶನ ಸುವರ್ಣ , ರಂಗ ನಿರ್ದೇಶಕರಾದ ನಾಗೇಶ್ ಕುಮಾರ್ ಉದ್ಯಾವರ್, ಶುಭಲಕ್ಷ್ಮಿ ಕಡೆಕಾರ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!