ಕುಂದಾಪುರ: ಪುರಸಭೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ಕುಂದಾಪುರ: ಪುರಸಭೆಗೆ ಇಂದು ಜಿಲ್ಲಾಧಿಕಾರಿ ಜಿ. ಜಗದೀಶ್ ದಿಢೀರ್ ಭೇಟಿ ನೀಡಿದರು. ಸಕಾಲ ಅಡಿಯಲ್ಲಿ ನೀಡುವ ಅರ್ಜಿ ವಿಲೇವರಿ ಮಾಡುವಲ್ಲಿ ವಿಳಂಬ ದೋರಣೆ ತೋರುವ ಬಗ್ಗೆ ಸಾರ್ವಜಿನಿಕರ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆನ್ನಲಾಗಿದೆ.


ಜಿಲ್ಲಾಧಿಕಾರಿಗಳ ಈ ದಿಢೀರ್ ದಾಳಿಯಿಂದ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ತಕ್ಷಣ ಜಿಲ್ಲಾಧಿಕಾರಿಗಳಿಗೆ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಬ್ಬಿಬಾದರು. ಜಿಲ್ಲಾಧಿಕಾರಿಗಳು ನಿರ್ವಾಹಕರು, ಕಂದಾಯ ನಿರೀಕ್ಷಕರ ಕುರ್ಚಿಯಲ್ಲಿ ಕುಳಿತು ಬಾಕಿ ಇರುವ ಅರ್ಜಿಗಳ ಪರಿಶೀಲನೆ ನಡೆಸಿದರು. ಸಕಾಲ ಅಡಿಯಲ್ಲಿ ಅರ್ಜಿ ಪಡೆಯುವ ಬಗ್ಗೆ ಖುದ್ದು ತಪಾಸಣೆ ನಡೆಸಿ , ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಒದಗಿಸುವಂತೆ ಸೂಚಿಸಿದರು .

1 thought on “ಕುಂದಾಪುರ: ಪುರಸಭೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

  1. CONGRATS SIR, WE CAN EXPECT MUCH IN UDUPI DISTRICT(.)
    PLEASE VISITS TO ALL TALUK OFFICES TO EXCELARATE PENDING WORKS AND SURPRISE VISITS WILL IMPROVE DISCIPLINE AMONG STAFF AND SERVICE TO MASS.

Leave a Reply to jayarama Acharya Cancel reply

Your email address will not be published. Required fields are marked *

error: Content is protected !!