ರಾಜ ಧರ್ಮ ಮೀರಿದ ಸ್ಪೀಕರ್ – ಕೋಟ ಶ್ರೀನಿವಾಸ್ ಪೂಜಾರಿ ಟ್ವಿಟ್ 

ನಿನ್ನೆಯಿಂದ ವಿಶ್ವಾಸ ಮತ ಯಾಚನೆ ವಿಚಾರವಾಗಿ ಸಮಯ  ಮುಂದೂಡುತ್ತಿರುವ ಮೈತ್ರಿ ಸರ್ಕಾರದ ವಿರುದ್ಧ ವಿಧಾನ ಪರಿಷತ್  ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಟ್ವಿಟ್ ಮಾಡಿದ್ದಾರೆ ವಿಶ್ವಾಸ  ಮತಯಾಚನೆ ವಿಚಾರವಾಗಿ ಸ್ಪೀಕರ್ ರಮೇಶ್ ಕುಮಾರ್ ರಾಜಧರ್ಮ‌ ಮೀರಿದ್ದಾರೆ ಎಂದು  ಕೋಟ ದೂರಿದ್ದಾರೆ .

ಇಂದಿನ ಬೆಳವಣಿಗೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತ ಅವರು , ರಾಜ್ಯದಲ್ಲಿ ಈ ಹಿಂದೆ 7 ಬಾರಿ ವಿಶ್ವಾಸಮತ ಯಾಚನೆಯಾದಾಗ ಒಂದೇ ದಿನದಲ್ಲಿ ಮುಗಿದ ದಾಖಲೆ ಇದೆ. ಎಚ್. ಡಿ.ಕುಮಾರಸ್ವಾಮಿಯವರ ಸರ್ಕಾರ ಮಾತ್ರ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡನೀಯ. ಸ್ಪೀಕರ್ ರಮೇಶ್ ಕುಮಾರ್ ರಾಜ ಧರ್ಮ ಮೀರಿ ನಡೆದದ್ದು ನೋವು ತಂದಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ  ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!