ಪಕ್ಷದ ಮೇಲೆ‌ ವಿಶ್ವಾಸವಿಟ್ಟು ಪೂರ್ಣ ಬಹುಮತ ನೀಡಿದ್ದಾರೆ:ಕೋಟ

ಉಡುಪಿ- ಮತದಾರರು ಪಕ್ಷದ ಮೇಲೆ‌ ವಿಶ್ವಾಸವಿಟ್ಟು ಪೂರ್ಣ ಬಹುಮತ ನೀಡಿದ್ದಾರೆ ಈ ಗೆಲುವು ಕಾರ್ಯಕರ್ತರ ಗೆಲುವು ಎಂಬುದಾಗಿ ದ.ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿದರು.ಉಡುಪಿಯಲ್ಲಿ ಮಾದ್ಯಮಗಾರರೊಂದಿಗೆ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಗೆಲುವನ್ನು ಕಾರ್ಯಕರ್ತರಿಗೆ ಸಮರ್ಪಿಸಿದರು. ,ಈ ಗೆಲುವು ಕಾರ್ಯಕರ್ತನ ಶ್ರಮದ ಗೆಲುವಿನ ಸಂಕೇತ ಎಂದರು ,ಮತಯಾಚನೆ ವೇಳೆ‌ ನಾವು ನೀಡಿದ ಭರವಸೆ ಈಡೇರಿಸುತ್ತೇವೆ .ಸ್ಮಾರ್ಟ್ ಸಿಟಿ, ಸ್ವಚ್ಛ ಭಾರತ್ , ಯೋಜನೆಗಳ ಅನುಷ್ಠಾನದ ಭರವಸೆಗಳ ಮೇಲೆ‌ ಮತದಾರರ ವಿಶ್ವಾಸ ಗೆಲ್ಲುತ್ತೇವೆ ಎಂಬುದಾಗಿ ಮುಜರಾಯಿ ಸಚಿವ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದರು .

Leave a Reply

Your email address will not be published. Required fields are marked *

error: Content is protected !!