ಅಮಿತ್ ಶಾ,ಯಡಿಯೂರಪ್ಪ ಸ್ವಾತಂತ್ರ್ಯ ಹೋರಾಟ ಮಾಡಿ ಬಂಧನವಾಗಿದ್ದ?:ಕಿಶನ್ ಹೆಗ್ಡೆ

ಯಡಿಯೂರಪ್ಪ, ಅಮಿತ್ ಶಾ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲು ಸೇರಿದ್ದಾ? ಸಚಿವ ಶ್ರೀನಿವಾಸ ಪೂಜಾರಿಗೆ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಪ್ರಶ್ನೆ

ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಡಿ.ಕೆ ಶಿವಕುಮಾರ್ ಅವರು ಸ್ವಾತಂತ್ರ್ಯ ಹೋರಾಟ ಮಾಡಿ ಬಂಧಿಸಿದ್ದಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ.

ಹಾಗಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ವಾತಂತ್ರ್ಯ ಹೋರಾಟ ಮಾಡಿ 25 ದಿನಗಳ ಜೈಲು ವಾಸ ಅನುಭವಿಸಿದ್ದಾ ?

ಅದೇ ರೀತಿ ಬಿ.ಜೆ.ಪಿ ರಾಷ್ಟ್ರಾಧ್ಯಕ್ಷ ದೇಶದ ಗೃಹ ಸಚಿವ ಅಮಿತ್ ಶಾ ಬಂಧನಕ್ಕೊಳಗಾಗಿ ಗುಜರಾತ್‌ನಿಂದ ಗಡಿಪಾರಾಗಿದ್ದು ಸ್ವಾತಂತ್ರ್ಯ ಹೋರಾಟದ ಸಲುವಾಗಿಯಾ ? ಈ ಪ್ರಶ್ನೆಗಳಿಗೂ ಸಚಿವರು ಉತ್ತರಿಸಬೇಕಾಗಿದೆ.

ಕೇವಲ ರಾಜಕೀಯ ದ್ವೇಷಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಗಿದೆ, ನ್ಯಾಯಲಯದ ಮೇಲೆ ಅದಮ್ಯ ವಿಶ್ವಾಸವಿದೆ, ನ್ಯಾಯ ಸಿಕ್ಕಿಯೇ ಸಿಗುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!