ಗುರುಪೀಠಕ್ಕೆ ಶಿರಬಾಗುವುದರಿಂದ ಜನ್ಮಸಾರ್ಥಕ; ಕಾಶೀ ಮಠಾಧೀಶ ಶ್ರೀಮತ್ ಸಂಯಮೀ೦ದ್ರ ತೀರ್ಥರು

ಕಾರ್ಕಳ: ತನ್ನ ಮಕ್ಕಳ ಒಳಿತಿಗಾಗಿ ಸದಾಕಾಲ ದೇವರಲ್ಲಿ ಬೇಡುವ ತಾಯಿ, ಹಾಗೂ ಸಮಾಜದ ಒಳಿತಿಗಾಗಿ ಹಗಲಿರುಳು ದೇವರಲ್ಲಿ ಬೇಡುವ ಗುರುಗಳು, ಗುರುಪೀಠಕ್ಕೆ ಶಿರಬಾಗುವುದರಿಂದ ಜನ್ಮಸಾರ್ಥಕವಾಗುವುದು ಎಂದು ಕಾಶೀ ಮಠಾಧೀಶ ಶ್ರೀಮತ್ ಸಂಯಮೀ೦ದ್ರ ತೀರ್ಥರು ಆಶೀರ್ವಚನ ನೀಡಿದರು.

ಮುನಿಯಾಲು ವೆಂಕಟರಮಣ ದೇವಸ್ಥಾನದಲ್ಲಿ ತಮ್ಮ ಮೊಕ್ಕಾಂ ಸಂದರ್ಭದಲ್ಲಿ ಆಯೋಜಿಸಲಾದ ಮಹಾಸಭಾ ಕಾರ್ಯಕ್ರಮ.

ಶ್ರೀಗಳ ನಾಲ್ಕು ದಿನಗಳ  ಮೊಕ್ಕಾಂ ನ ಸಮಾರೋಪ ಸಮಾರಂಭದಲ್ಲಿ ದೇವಳದ ಅನುವಂಶಿಕ ಮೊಕ್ತೇಸರ ನಾಗೇಶ್ ನರಸಿಂಹ ನಾಯಕ್, ಮಂಗಳೂರಿನ ನಿಗಮಾಗಮ ಪಾಠಶಾಲೆಯ ಪ್ರಾಚಾರ್ಯ ಸುಧಾಕರ ಭಟ್, ವೇ. ಮೂ. ರುಕ್ಮಯ್ಯ ಭಟ್, ವೇ. ಮೂ. ನರಸಿಂಹ ಮೂರ್ತಿ, ಅನುವಂಶಿಕ ಮೊಕ್ತೇಸರರುಗಳಾದ ಎಂ.ಗಣೇಶ್ ಪೈ ಅಲಂಗಾರು, ಕಾಡುಹೊಳೆ ಗಣೇಶ್ ಪೈ, ಕೆ.ಗೋಪಾಲಕ್ರಷ್ಣ ಪೈ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಸರ್ವೋತ್ತಮ ನಾಯಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!