ಉಡುಪಿ: ಬ‌ಡ‌ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಿದ ಕೆ.ಉದಯಕುಮಾರ್ ಶೆಟ್ಟಿ

ಉಡುಪಿ: (ಉಡುಪಿ ಟೈಮ್ಸ್ ವರದಿ ) ಕೆ.ಉದ‌ಯ‌ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರ‌ಸ್ಟ್(ರಿ.) ಉಡುಪಿ ಇದ‌ರ‌ ವತಿಯಿಂದ ಕೊರೊನಾ ಮಹಾಮಾರಿ ಭೀತಿಯಿಂದ ಸಂಕಷ್ಟದಲ್ಲಿರುವ ಬ‌ಡ‌ ಕುಟುಂಬಗಳಿಗೆ ತ‌ಲಾ 5 ಕೆಜಿ ಅಕ್ಕಿ ಹಾಗೂ ಸುಮಾರು 800 ಮಂದಿಗೆ ದಿನಂಪ್ರತಿ ಭೋಜ‌ನ‌ದ‌ ವ್ಯ‌ವ‌ಸ್ಥೆಗೆ ಕೆ.ಉದ‌ಯ‌ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರ‌ಸ್ಟ್ (ರಿ.) ಉಡುಪಿ ಇದ‌ರ‌ ಪ್ರ‌ವ‌ರ್ತ‌ಕ‌, ಬಿಜೆಪಿ ಮಂಗಳೂರು ವಿಭಾಗ‌ ಪ್ರ‌ಭಾರಿ ಕೆ.ಉದ‌ಯ‌ ಕುಮಾರ್ ಶೆಟ್ಟಿಯ‌ವ‌ರು ಇಂದು ಅವ‌ರ‌ ಕಿದಿಯೂರು ನಿವಾಸ‌ದ‌ ಬ‌ಳಿ ಚಾಲ‌ನೆ ನೀಡಿದ‌ರು.

ಕರೋನಾ ಎಮರ್ಜೆನ್ಸಿ ಸಂದರ್ಭದಲ್ಲಿ ಉಡುಪಿ ನ‌ಗ‌ರ‌ ರಿಕ್ಷಾ ಚಾಲ‌ಕ‌ರ‌ ಸಂಘದ ಸ‌ದ‌ಸ್ಯ‌ರು, ಪ‌ರಿಸ‌ರ‌ದ‌ ಸಂಕಷ್ಟದಲ್ಲಿರುವ ಗ್ರಾಮ‌ಸ್ಥ‌ರಿಗೆ ಹಾಗೂ ಕಾರ್ಮಿಕ‌ರ‌ ಸುಮಾರು 150 ಕುಟುಂಬಗಳಿಗೆ ಅಕ್ಕಿಯನ್ನು ವಿತ‌ರಿಸ‌ಲಾಯಿತು. ಈ ಸೌಲ‌ಭ್ಯ‌ವ‌ನ್ನು ಎಪ್ರಿಲ್ 14ರ‌ ವ‌ರೆಗೂ ವಿವಿಧ‌ ಕೇಂದ್ರಗಳಲ್ಲಿ ವಿಸ್ತ‌ರಿಸ‌ಲಾಗುವುದು” ಎಂದು ಕೆ.ಉದ‌ಯ‌ ಕುಮಾರ್ ಶೆಟ್ಟಿಯ‌ವ‌ರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯ‌ಕ್ಷ‌ ಪ್ರ‌ಮೋದ್ ಸಾಲ್ಯಾನ್, ಉಪಾಧ್ಯ‌ಕ್ಷೆ ಉಷಾ ಕಿದಿಯೂರು, ತಾಲೂಕು ಪಂಚಾಯತ್ ಮಾಜಿ ಉಪಾಧ್ಯ‌ಕ್ಷ‌ ರಾಜೇಂದ್ರ ಪಂದುಬೆಟ್ಟು ಬಿಜೆಪಿ ಜಿಲ್ಲಾ ಸ‌ಹ‌ ವ‌ಕ್ತಾರ‌ ಶಿವ‌ಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!